ಸ್ಲಂ ಜನ್ರಿಗೆ ಯರ್ರೀ ಪ್ರಶಸ್ತಿ ಕೊಡ್ತಾರೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲ್ಯಾಣ ಕರ್ನಾಟಕದಂತಹ ಹಿಂದುಳಿದ ಪ್ರದೇಶದ, ಅದರಲ್ಲೂ ಸ್ಲಂ ಜನರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದ್ದು ಖುಷಿ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಇದು ಸಾಧ್ಯ. ನನ್ನ ಜೀವನದ ಅತ್ಯಂತ ಸಂತಸದ ಕ್ಷಣವಿದು.
ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಸರ್ಜಿಕಲ್ ಆಂಕೋಲಜಿ ತಜ್ಞೆ, ಬೆಂಗಳೂರು ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ವಿಶ್ರಾಂತ ನಿರ್ದೇಶಕಿ ಡಾ.ವಿಜಯಲಕ್ಷಿö್ಮÃ ದೇಶಮಾನೆ ಭಾವುಕರಾದಾಗ ಹೊರಬಂದ ಮನದಾಳದ ಮಾತಿದು.
ಡಾ.ದೇಶಮಾನೆ ಅವರು ಕಲಬುರಗಿಯ ತಮ್ಮ ನಿವಾಸದಲ್ಲಿ ಶನಿವಾರ ವಿಜಯವಾಣಿ ಪತ್ರಿನಿಧಿ ಜತೆಗೆ ಮಾತನಾಡಿದ ಅವರು, ದಿ.ಅನಂತಕುಮಾರ ಕೇಂದ್ರ ಸಚಿವರಾಗಿದ್ದ ಅವಧಿಯಲ್ಲಿ ನನ್ನನ್ನು ಕರೆದು ಬಯೊಡೇಟಾ ಪಡೆದುಕೊಂಡಿದ್ದರು. ಆ ನಂತರ ಸದಾನಂದಗೌರು ಪಡೆದುಕೊಂಡಿದ್ದರು. ಈ ಪ್ರಶಸ್ತಿ ಸಿಗುತ್ತೆ ಎಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ, ಮೂರು ದಿನಗಳ ಕೆಳಗೆ ಪ್ರಧಾನಿ ಕಚೇರಿಯಿಂದ ಕರೆ ಬಂದು ಮಾಹಿತಿ ನೀಡಿದರು. ಜತೆಗೆ ಬಯೋಡೇಟಾ ಸಹಿತ ಅಗತ್ಯ ಮಾಹಿತಿ ಕೇಳಿದ್ದರು. ಎಲ್ಲವನ್ನೂ ಪ್ರಧಾನಿ, ರಾಷ್ಟçಪತಿ ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಿಕೊಡಲಾಗಿದೆ ಎಂದು ವಿವರಿಸಿದರು.

ಅಮ್ಮನ ತರಕಾರಿ ವ್ಯಾಪಾರ ಕೈಹಿಡಿಯಿತು
ಅಪ್ಪ ಬಾಬುರಾವ್ ದೇಶಮಾನೆ, ಅಮ್ಮ ರತ್ನಮ್ಮ ದೇಶಮಾನೆ ಉದರದಲ್ಲಿ ಜನಿಸಿದ ಡಾ.ವಿಜಯಲಕ್ಷಿö್ಮÃ ದೇಶಮಾನೆಯವರದು ಕಡುಬಡತನದ ಕುಟುಂಬ. ಅಪ್ಪ ಎಂಎಸ್ಕೆ ಗಿರಣಿಯಲ್ಲಿ ಕೆಲಸ, ಮನೆಯಲ್ಲಿ ಹತ್ತು ಜನರ ಸಂಸಾರ. ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡಲೇಬೇಕೆಂಬ ಆಸೆ. ಅಮ್ಮನ ತರಕಾರಿ ವ್ಯಾಪಾರ ಕೈಹಿಡಿಯಿತು. ಇಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದರೂ ಅಪ್ಪ ನಮ್ಮನ್ನೆಲ್ಲ ಸಾಲ, ಸೂಲಾ ಮಾಡಿ ಓದಿಸಿದರು. ಎಲ್ಲರೂ ಈಗ ಒಳ್ಳೆಯ ಕೆಲಸದಲ್ಲಿದ್ದಾರೆ. ಆ ದೇವರು ನಮ್ಮ ಕಷ್ಟಕ್ಕೆ ಸ್ಪಂದಿಸಿದ ಎಂದು ಹೇಳುವಾಗ ಗೊತ್ತಿಲ್ಲದಂತೆ ಕಣ್ಣಿನಲ್ಲಿ ನೀರು ಹರಿಯಿತು.
ಐಐಐಟಿ ಚೇರ್ಪರ್ಸನ್
ಡಾ.ವಿಜಯಲಕ್ಷಿö್ಮÃ ದೇಶಮಾನೆ ಅವರನ್ನು ಕೇರಳ ಕೊಟ್ಟಾಯಂನ ಐಐಐಟಿಗೆ ಕೇಂದ್ರ ಸರ್ಕಾರ ಅಧ್ಯಕ್ಷರಾಗಿ ಕಳೆದ ವರ್ಷ ನೇಮಕ ಮಾಡಿದೆ. ಜತೆಗೆ ಐಐಐಟಿ-ಡಿಎಂ ಸಂಸ್ಥೆಗೂ ಪ್ರಭಾರಿ ಚೇರ್ಪರ್ಸನ್ ಆಗಿ ನೇಮಿಸಿದೆ. ಸ್ಲಂ ಜನರನ್ನು, ಅದರಲ್ಲಿನ ಪ್ರತಿಭಾವಂತರನ್ನು ಗುರುತಿಸುವುದು ಈ ದಿನಗಳಲ್ಲಿ ಕಷ್ಟ. ಆದರೆ ಪ್ರಧಾನಿ ಮೋದಿ ಸರ್ಕಾರ ಈ ಕೆಲಸ ಮಾಡುತ್ತಿದೆ. ರಾಷ್ಟçಪತಿ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗಕ್ಕೆ ಸೇರಿದವರು. ಅವರನ್ನು ಅತ್ಯುನ್ನತ ಗೌರವದ ರಾಷ್ಟçಪತಿ ಹುದ್ದೆ ನೇಮಕ ಮಾಡಿ ದೇಶದ ಜನ ಹುಬ್ಬೇರುವಂತೆ ಮಾಡಿದ್ದಾರೆ. ಯಾರೂ ಏನೇ ಹೇಳಿದರೂ ಮೋದಿ ನನ್ನ ರೋಲ್ ಮಾಡೆಲ್. ಭಾರತವನ್ನು ನಂಬರ್ ತ್ರಿ ಎಕಾನಮಿ ದೇಶವಾಗಿಸಿದ್ದಾರೆ. ವಿದೇಶದವರು ಭಾರತವನ್ನು ಗೌರವದಿಂದ ಕಾಣುವಂತಾಗಿದೆ. ಮಿತ್ರ ರಾಷ್ಟçಗಳು ಹೆಚ್ಚಾದರೆ ಯುದ್ದಗಳು ಆಗೋದಿಲ್ಲ. ಹೀಗಾಗಿ ದೇಶದ ಜನ ಶಾಂತಿ, ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮುರ್ಮು, ಮೋದಿಗೆ ಕೃತಜ್ಞತೆ
ರಾಷ್ಟçಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕರ್ನಾಟಕ, ಅದರಲ್ಲೂ ನನ್ನ ಊರು, ನನ್ನ ಸಮಾಜಕ್ಕೆ ಮರ್ಯಾದೆ ಸಿಕ್ಕಿದೆ. ನಾನು ಈ ಸ್ಥಾನಕ್ಕೆ ಬರಲು ಸ್ವಾತಂತ್ರÈ ಹೋರಾಟಗಾರ ಅಪ್ಪನ ಕೊಡುಗೆ ಅಪಾರ ಎಂದು ಸ್ಮರಿಸಿದರು. ಬೆಂಗಳೂರಿನ ಬಳಿಯ ಹಳ್ಳಿಯೊಂದರಲ್ಲಿ ಶ್ರೀಕೃಷ್ಣ ಮಂದಿರ ಕಟ್ಟಿಸಿ, ಅಲ್ಲಿಯೇ ಸೇವೆ ಸಲ್ಲಿಸುತ್ತಿz್ದೆÃನೆ. ನನಗೆ ಶ್ರೀಕೃಷ್ಣ ಆದರ್ಶ. ಹೀಗಾಗಿ ನನ್ನ ನಂತರ ಜನ ನನ್ನನ್ನು ಮರೆಬಾರದು ಎಂಬ ಕಾರಣಕ್ಕೆ ಕೃಷ್ಣ ಮಂದಿರ ನಿರ್ಮಾಣ ಮಾಡಿz್ದÉÃನೆ. ಈ ಮಂದಿರ ಮೂಲಕ ಹಳ್ಳಿಯ ಜನ ಸ್ಮರಿಸಿಕೊಳ್ಳಬೇಕು ಎಂಬುದು ನನ್ನಾಸೆ ಎಂದು ಡಾ.ದೇಶಮಾನೆ ಹೇಳಿದರು.
ಕಲಬುರಗಿ ಹಿಂದುಳಿದ ಊರು. ಜನರು ತುಂಬಾ ಸರಳ. ಶರಣರು ನಡೆದಾಡಿದ ಭೂಮಿ. ಇಲ್ಲಿನ ಜನರ ನಡೆ, ನುಡಿ ಒಂದೇ.ಪ್ರಪAಚ ಬದಲಾದರೂ ಇಲ್ಲಿನ ಜನ ತಮ್ಮ ಸ್ವಂತಿಕೆ ಉಳಿಸಿಕೊಂಡಿದ್ದಾರೆ. ಭಾಷೆ ಬಿರುಸು, ಮನಸ್ಸು ಸರಳ, ಸ್ವಚ್ಛ. ಈ ನೆಲದಲ್ಲಿ ಹುಟ್ಟಿದ ಪುಣ್ಯವಂತೆ ನಾನು. ನಮ್ಮ ಮನೆತನದ ಯಶಸ್ಸಿಗೆ ಈ ಊರಿನ ಜನ ಕಾರಣ.
| ಡಾ.ವಿಜಯಲಕ್ಷಿö್ಮÃ ದೇಶಮಾನೆ,
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯೆ