ಪರೀಕ್ಷೆಗೆ ತೆರಳಲು ಪರದಾಡಿದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು

ವಿಜಯಪುರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಕೆಲವು ಕಡೆ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆಗೆ ತೆರಳಲು ಹರಸಾಹಸ ನಡೆಸಬೇಕಾಗಿ ಬಂತು. ಮುದ್ದೇಬಿಹಾಳ ತಾಲ್ಲೂಕಿನ ಚವನಬಾವಿ ಹಾಗೂ ನಾಲತವಾಡ ಸಂಪರ್ಕಿಸುವ ರಸ್ತೆಯ ಸೇತುವೆ ಮೇಲೆಯೇ ಹಳ್ಳದ ನೀರು ರಭಸದಿಂದ ಹರಿಯುತ್ತಿದ್ದ ಕಾರಣ ವಿದ್ಯಾರ್ಥಿಗಳು ಭಾರಿ ತೊಂದರೆ ಅನುಭವಿಸಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹೋಗಲು ಜೀವ ಅಂಗೈಯಲ್ಲಿ ಹಿಡಿದು ಹಳ್ಳದ ಪ್ರವಾಹದ ನೀರನ್ನು ವಿದ್ಯಾರ್ಥಿಗಳು ದಾಟಿ ಮುನ್ನಡೆದರು. ನಾಗರಬೆಟ್ಟದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಅವರು ಹಾಜರಾಗಬೇಕಾಗಿತ್ತು. ರಾತ್ರಿ ಭಾರೀ ಮಳೆ ಆಗಿರುವ ಕಾರಣ … Continue reading ಪರೀಕ್ಷೆಗೆ ತೆರಳಲು ಪರದಾಡಿದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು