More

    ಆದಿಚುಂಚನಗಿರಿಯಲ್ಲಿ ವಿಜಯದಶಮಿ ಆಚರಣೆ

    ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ವಿಜಯದಶಮಿ ಅಂಗವಾಗಿ ಕ್ಷೇತ್ರಾಧಿದೇವತೆಗಳಿಗೆ ವಿಶೇಷ ಅಲಂಕಾರ ಮಾಡಿ, ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಶೇಷ ಪೂಜೆಗಳು ಜರುಗಿದವು.


    ಮಠದಲ್ಲಿ ಆಯುಧಪೂಜೆ ಅಂಗವಾಗಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದ ಸ್ವಾಮೀಜಿ, ಮಠದ ಸಿಬ್ಬಂದಿಗೆ ವಸ್ತ್ರ ಹಾಗೂ ಪ್ರಸಾದ ವಿತರಣೆ ಮಾಡಿದರು. ಸೋಮವಾರ ರಾತ್ರಿ ಸಿದ್ಧಸಿಂಹಾಸನ ಪೂಜೆ, ಜ್ವಾಲಾಪೀಠಾರೋಹಣ ಹಾಗೂ ಷೋಡಶೋಪಚಾರ ಪೂಜೆ ಜರುಗಿದವು.
    ಮಂಗಳವಾರ ವಿಜಯದಶಮಿ ಅಂಗವಾಗಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಜರುಗಿತು. ಸಂಜೆ ಬನ್ನಿ ಕಡಿದು ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಸ್ವಾಮೀಜಿಗಳು ಹಾಗೂ ನೂರಾರು ಭಕ್ತರು ಇದ್ದರು


    ಶರನ್ನವರಾತ್ರಿ ಉತ್ಸವ: ಕಳೆದ 9 ದಿನಗಳಿಂದ ನಡೆದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಮುಂಜಾನೆ ಹಾಗೂ ರಾತ್ರಿ ವೇಳೆ ನಾನಾ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದವು. ಪ್ರತಿದಿನ ರಾತ್ರಿ 7 ಗಂಟೆಗೆ ಶ್ರೀಗಳ ಸಿಂಹಾಸನ ಪೂಜೆ ನೆರವೇರುತ್ತಿತ್ತು. ನಂತರ ಶ್ರೀಮಠದ ವಟುಗಳಿಂದ ಸರ್ವಾಲಂಕೃತಗೊಂಡ ಶ್ರೀಗಳಿಗೆ ಚಿನ್ನದ ಕಿರೀಟಧಾರಣೆ ಮಾಡಿ ಗುರುಪೀಠದಲ್ಲಿ ಕೂರಿಸಿ ಷೋಡೋಶೋಪಚಾರ ಪೂಜೆ ಸಲ್ಲಿಸಲಾಗುತ್ತಿತ್ತು. ಪೂಜೆಯ ನಂತರ ನೆರೆದಿದ್ದ ಭಕ್ತರಿಗೆ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts