More

    ವಿಜಯ್ ಪ್ರಕಾಶ್​ಗೆ ಸನ್ಮಾನ ಮಾಡುವ ವಿಷಯದಲ್ಲಿ ಶಾಸಕ, ಡಿಸಿ ನಡುವೆ ರಂಪಾಟ: ಬೇಸರಗೊಂಡ ವಿಪಿ ಮಾಡಿದ್ದೇನು?

    ಕೊಪ್ಪಳ: ಪ್ರಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಅವರಿಗೆ ಸನ್ಮಾನ ಮಾಡುವ ವಿಷಯದಲ್ಲಿ ಶಾಸಕ ಮತ್ತು ಜಿಲ್ಲಾಧಿಕಾರಿ ನಡುವೆ ರಂಪಾಟ ನಡೆದ ಪ್ರಸಂಗ ಆನೆಗೊಂದಿ ಉತ್ಸವದಲ್ಲಿ ಗುರುವಾರ ರಾತ್ರಿ ನಡೆದಿದೆ.

    ಗಂಗಾವತಿಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿರನ್ನು ಬಿಟ್ಟು ಜಿಲ್ಲಾಧಿಕಾರಿ ಸುನೀಲಕುಮಾರ್ ಅವರು ಗಾಯಕ ವಿಜಯ್​ ಪ್ರಕಾಶ್​ ಅವರಿಗೆ ಸನ್ಮಾನ ಮಾಡಿದ್ದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.

    ಆಗಿದ್ದೇನೆಂದರೆ… ಡಿಸಿ ಸುನೀಲ್​ ಕುಮಾರ್​ ಸನ್ಮಾನ ಮಾಡಿ ವೇದಿಕೆಯಿಂದ ಹೊರಟು ಹೋದರು. ಡಿಸಿ ವರ್ತನೆಗೆ ಬೇಸರಗೊಂಡು ಶಾಸಕ ಮುನವಳ್ಳಿ ಅಧಿಕಾರಿಗಳ ಎದುರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಸ್ಪಿ ಸಂಗೀತಾ ಅವರು ಸಮಾಧಾನ ಮಾಡಲು ಮುಂದಾದರು. ಬಳಿಕ ವೇದಿಕೆ ಮೇಲೆ ಬಂದು ಇನ್ನೊಮ್ಮೆ ಸನ್ಮಾನ ಮಾಡುವಂತೆ ಅಧಿಕಾರಿಗಳು ಶಾಸಕರಲ್ಲಿ ಮನವಿ ಮಾಡಿದರು.

    ಆದರೆ, ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದೆ ಶಾಸಕ ಪರಣ್ಣ ಮುನವಳ್ಳಿ ವೇದಿಕೆ ಕೆಳಗಡೆ ಕುಳಿತಿದ್ದರು. ಈ ಬೆಳವಣಿಗೆಯಿಂದ ಬೇಸರಗೊಂಡ ಗಾಯಕ ವಿಜಯ್​ ಪ್ರಕಾಶ್​, ಕಾರ್ಯಕ್ರಮವನ್ನು ನಿಲ್ಲಿಸಿ, ವೇದಿಕೆಯಿಂದ ಕೆಳಗಡೆ ಇಳಿದು ಬಂದು ವೇದಿಕೆ ಮೇಲೆ ಬರುವಂತೆ ಶಾಸಕ ಪರಣ್ಣಗೆ ಮನವಿ ಮಾಡಿದರು. ಕೊನೆಗೆ ವೇದಿಕೆ ಮೇಲೆ ಬಂದ ಶಾಸಕರು ಬೆಂಬಲಿಗರೊಂದಿಗೆ ವಿಜಯ್​ ಪ್ರಕಾಶ್​ ಅವರಿಗೆ ಸನ್ಮಾನ ಮಾಡಿದರು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts