ವೀರೇಶ್​ ಬೊಮ್ಮಸಾಗರ ನಿರ್ದೇಶನದಲ್ಲಿ ಸೋಮಾರಿ “ರಾಜರತ್ನಾಕರ’ನಾಗಿ ಚಂದನ್​ ರಾಜ್​!

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

blank

ಕನ್ನಡ ಕಿರುತರೆ, ಹಿರಿತೆರೆಯಲ್ಲಿ ಸತತ 12 ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿರುವ ಬಾದಾಮಿ ಮೂಲದ ವೀರೇಶ್​ ಬೊಮ್ಮಸಾಗರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. “ರಾಜರತ್ನಾಕರ’ ಎಂಬ ಚಿತ್ರದ ಮೂಲಕ ಮೊದಲ ಬಾರಿಗೆ ಡೈರೆಕ್ಟರ್​ ಕ್ಯಾಪ್​ ಧರಿಸುತ್ತಿದ್ದಾರೆ. “ಚಾರ್​ಮಿನಾರ್​’, “ಸಿದ್ಲಿಂಗು’ ಸಿನಿಮಾದಲ್ಲಿ ಬಾಲನಟನಾಗಿದ್ದ ಚಂದನ್​ ರಾಜ್​ ಪೂರ್ಣ ಪ್ರಮಾಣದ ನಾಯಕರಾಗಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ವೀರೇಶ್​ ಬೊಮ್ಮಸಾಗರ ನಿರ್ದೇಶನದಲ್ಲಿ ಸೋಮಾರಿ "ರಾಜರತ್ನಾಕರ'ನಾಗಿ ಚಂದನ್​ ರಾಜ್​!

ಅಪ್ಸರಾ, ಚಂದನ್​ ರಾಜ್​ಗೆ ಜೋಡಿಯಾಗಿದ್ದು, ನಾಗರಾಜ್​ ರಾವ್​, ಯಮುನಾ ಶ್ರೀನಿಧಿ, ಚೇತನ್​ ದುರ್ಗಾ, ಸಿದ್ದು, ಡಿಂಗ್ರಿ ನರೇಶ್​ ಕಲಾ ಬಳಗದಲ್ಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಸದ್ಯದಲ್ಲೇ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದೆ. “ರಾಜರತ್ನಾಕರ’ ದುರಂಹಕಾರಿ, ಸೋಮಾರಿಯೊಬ್ಬನ ಕಥೆ. ಹಾಗೆಯೇ ಬೆಂಗಳೂರಿನ ಮಧ್ಯಮ ವರ್ಗದ ಜನರ ಜೀವನದ ಮೇಲೂ ಬೆಳಕು ಚೆಲ್ಲುವ, ದುರಂಹಕಾರಿ ಸೋಮಾರಿಯು ಇಲ್ಲಿ ಹೇಗೆ ಜೀವನ ಕಟ್ಟಿಕೊಳ್ಳುತ್ತಾನೆ? ಎಂಬುದನ್ನು ತೋರಿಸುವ ಪ್ರಯತ್ನ ಚಿತ್ರತಂಡದ್ದು.

ವೀರೇಶ್​ ಬೊಮ್ಮಸಾಗರ ನಿರ್ದೇಶನದಲ್ಲಿ ಸೋಮಾರಿ "ರಾಜರತ್ನಾಕರ'ನಾಗಿ ಚಂದನ್​ ರಾಜ್​!

ಎಲ್ಲರ ಮನೆಯಲ್ಲೂ ಇಂತಹ ವ್ಯಕ್ತಿಗಳು ಇರುವುದರಿಂದ ಇದು ಎಲ್ಲರಿಗೂ ಕನೆಕ್ಟ್​ ಆಗುವ ಕಥೆ ಎನ್ನುವುದು ಚಿತ್ರತಂಡದ ಅನಿಸಿಕೆ. ಇಲ್ಲಿ ಮೂರು ಸಾಹಸ ದೃಶ್ಯಗಳು ಹಾಗೂ ಮೂರು ಹಾಡುಗಳಿವೆ. ಸಿದ್ದು ಕೆಂಚನಹಳ್ಳಿ ಛಾಯಾಗ್ರಹಣ, ಶಾಂತಕುಮಾರ್​ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಹರ್ಷವರ್ಧನ್​ ರಾಜ್​ ಸಂಗೀತ, ವಿ.ನಾಗೇಂದ್ರ ಪ್ರಸಾದ್​ ಹಾಗೂ ಮಂಜುನಾಥ್​ ರಾವ್​ ಸಾಹಿತ್ಯ ಚಿತ್ರಕ್ಕಿದೆ.

ವೀರೇಶ್​ ಬೊಮ್ಮಸಾಗರ ನಿರ್ದೇಶನದಲ್ಲಿ ಸೋಮಾರಿ "ರಾಜರತ್ನಾಕರ'ನಾಗಿ ಚಂದನ್​ ರಾಜ್​!

Share This Article
blank

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

blank