ಪುಷ್ಪಪತ್ರೖೆಸ್ತು ಸೌವರ್ಣೆರಷ್ಟೋತ್ತರಶತೇನ ವಾ | ಪಂಚಾಶತಾ ವಾ ಸಂಪೂಜ್ಯ ಚಾನಂತಫಲಮಶ್ನುತೇ ||
ಪ್ರಕೃತಿದತ್ತವಾದ ಹೂ ಮತ್ತು ಪತ್ರಿಗಳ ಜೊತೆಗೆ ಚಿನ್ನದ ಅಥವಾ ಬೆಳ್ಳಿಯ ಹೂ ಮತ್ತು ಪತ್ರಿಗಳನ್ನು ಕೂಡ ಶಿವನಿಗೆ ಸಮರ್ಪಿಸಬಹುದಾಗಿದೆ. ಇವುಗಳಲ್ಲಿ ಅನುಕೂಲವಿದ್ದವರು ಒಂದು ನೂರ ಎಂಟು ಮತ್ತು ಅನುಕೂಲವಿಲ್ಲದವರು ಐವತ್ತು ಚಿನ್ನದ ಪುಷ್ಪಗಳಿಂದ ಅಥವಾ ಚಿನ್ನದ ಎಲೆಗಳಿಂದ (ಪತ್ರೆಗಳಿಂದ) ಶಿವನನ್ನು ಪೂಜಿಸಬೇಕು. ಇನ್ನೊಂದು ವಿಶೇಷವೇನೆಂದರೆ ಪ್ರಕೃತಿದತ್ತವಾದ ಹೂ ಪತ್ರಿಗಳಲ್ಲಿ ನಮಗೆ ಇಷ್ಟವಾದ ಆಕೃತಿಯನ್ನು ಮಾಡಲು ಸಾಧ್ಯವಿರುವುದಿಲ್ಲ. ಆದರೆ ಚಿನ್ನ ಮತ್ತು ರಜತಗಳಿಂದ ಮಾಡಲ್ಪಡುವ ಹೂ ಪತ್ರಿಗಳಲ್ಲಿ ನಮಗೆ ಇಷ್ಟವಾಗುವ ರೀತಿಯಲ್ಲಿ ಆಕೃತಿಗಳನ್ನು ಮಾಡಿಸಿ ಶಿವನಿಗೆ ಅರ್ಪಿಸಲು ಅವಕಾಶವಿರುತ್ತದೆ. ಹೀಗೆ ಚಿನ್ನದ ಪತ್ರಿ ಮತ್ತು ಪುಷ್ಪಗಳಿಂದ ಶಿವನನ್ನು ಪೂಜಿಸುವ ಶಿವಭಕ್ತನು ಅನಂತ ಸತ್ಪಲಗಳನ್ನು ಪಡೆಯುತ್ತಾನೆ. ಒಮ್ಮೊಮ್ಮೆ ಎಲ್ಲಾದರೂ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಪ್ರಕೃತಿದತ್ತವಾದ ಹೂ ಮತ್ತು ಪತ್ರಗಳು ದೊರೆಯದಿದ್ದಾಗ ಚಿನ್ನದಿಂದ ಮಾಡಲ್ಪಟ್ಟ ಹೂ ಪತ್ರೆಗಳನ್ನು ಧರಿಸುವ ಮೂಲಕ ಕೂಡ ಶಿವನ ಪೂಜೆಯನ್ನು ಸಂಪನ್ನಗೊಳಿಸಬಹುದಾಗಿದೆ.

| ಮುಕುಟಾಗಮ (4. 26)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು
ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.