ಹುಬ್ಬಳ್ಳಿ : ವರೂರಿನ ಎಜಿಎಂ ರೂರಲ್ ಕಾಲೇಜ್ ಆಫ್ ಇಂಜಿನೀಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿಗೆ ನ್ಯಾಕ್ ಕಮೀಟಿಯಿಂದ ಬಿ++ ಮಾನ್ಯತೆ ಲಭಿಸಿದೆ.
ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಕಾಲೇಜಿನಲ್ಲಿರುವ ಉತ್ತಮ ಸೌಲಭ್ಯ ಹಾಗೂ ಕಲಿಕಾ ವಾತಾವರಣಕ್ಕೆ ಈ ಮಾನ್ಯತೆ ಲಭಿಸಿದೆ ಎಂದು ಹೇಳಿದರು.
ಈ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ಎಂಬಿಎ, ಎಂಸಿಎ ಕೋರ್ಸ್ ಹಾಗೂ ರಿಸರ್ಚ್ ಸೆಂಟರ್ ಆರಂಭಿಸಲಾಗಿದೆ. ವಿವಿಧ ಕೋರ್ಸ್ಗಳಿಗೆ ಈಗಿರುವ ವಿದ್ಯಾಥಿರ್ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ ಎಂದರು.
ಹೊಸದಾಗಿ ಆರಂಭವಾಗಿರುವ ಎಂಬಿಎ ಮತ್ತು ಎಂಸಿಎಗೆ ಕೋರ್ಸ್ಗಳಿಗೆ ತಲಾ 60 ವಿದ್ಯಾಥಿರ್ಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಇಲ್ಲಿನ ಶೈಕ್ಷಣಿಕ ವಾತಾವರಣ, ನುರಿತ ಶಿಕ್ಷಕರ ಪಾಠ ಹಾಗೂ ಕಡಿಮೆ ಶುಲ್ಕದ ಕಾರಣಕ್ಕೆ ಇಲಲ್ಲಿ ಕಲಿತ ಅನೇಕ ವಿದ್ಯಾಥಿರ್ಗಳು ಇಂದು ಲಕ್ಷಾಂತರ ರೂ.ಸಂಬಳ ಪಡೆಯುತ್ತಿದ್ದಾರೆ. ಬಡ ವಿದ್ಯಾಥಿರ್ಗಳನ್ನು ಗಮನದಲ್ಲಿಟ್ಟುಕೊಂಡು ಸ್ಕಾಲರ್ ಶಿಪ್ ಕೂಡ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಬೇಸಿಗೆ ಶಿಬಿರ : ವರೂರು ಗ್ರಾಮದ ಸುತ್ತ್ತಲಿನ ಗ್ರಾಮಗಳ ಮಕ್ಕಳಿಗಾಗಿ ಮೇ 21 ರಿಂದ 27ರವರೆಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ವಿವಿಧ ಆಟಗಳು, ಯೋಗ, ಪ್ರಾಣಾಯಾಮ ಸೇರಿದಂತೆ ವಿವಿಧ ಬಗೆಯ ತರಬೇತಿ ನೀಡಲಾಗುವುದು. ನಿತ್ಯ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ 5 ಸಾವಿರ ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.