ವಾರಾಣಸಿ: ಇಂದು ಅಮವಾಸೆ. ಇದನ್ನು ಮೌನಿ ಅಮವಾಸೆ ಎಂದು ಕರೆಯುತ್ತಾರೆ. ವಾರಾಣಸಿಯಲ್ಲಿ ಇದನ್ನು ವಿಶೇಷವಾಗಿ ಆಚರಿಸುತ್ತಾರೆ.
ಸೂರ್ಯೋದಯಕ್ಕೂ ಮುನ್ನ ನದಿಗಳಲ್ಲಿ ಸ್ನಾನ ಮಾಡುವುದು ಸಂಪ್ರಾದಾಯ. ಹಾಗೂ ಬೆಲ್ಲ, ತುಪ್ಪಗಳನ್ನು ನದಿ ಅರ್ಪಣೆ ಮಾಡುವುದರಿಂದ ಪಿತೃಗಳಿಗೆ ತರ್ಪಣ ಸಲ್ಲಿಸಿದಂತಾಗುತ್ತದೆ ಎನ್ನುವುದು ನಂಬಿಕೆ.
ವಾರಾಣಸಿಯಲ್ಲಿ ಬೆಳಗಿನ ಜಾವವೇ ಗಂಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಸಾವಿರಾರು ಭಕ್ತರು ನದಿಯಲ್ಲಿ ಸ್ನಾನ ಮಾಡಿ, ಪೂಜೆಗಳಲ್ಲಿ ಭಾಗವಹಿಸಿದ್ದರು.
ಮೌನಿ ಅಮವಾಸೆ ಎಂದು ಕರೆಯಲ್ಪಡುವ ಇಂದು, ದೇವಾನುದೇವತೆಗಳು ವೇಷ ಬದಲಿಸಿ ಭೂಮಿಗೆ ಬಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ ಎಂಬುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಇಂದು ನದಿಯಲ್ಲಿ ಮಿಂದೆದ್ದರೆ ಪಾಪಕರ್ಮಗಳೆಲ್ಲ ನಾಶವಾಗುತ್ತವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. (ಏಜೆನ್ಸೀಸ್)