ಬದುಕಿನಲ್ಲಿ ಮೌಲ್ಯಗಳ ಅನುಪಾಲನೆ ಅಗತ್ಯ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ದಾರ್ಶನಿಕ ಜಗತ್ತು ಪ್ರತಿಪಾದಿಸಿದ ಮೇರು ಜೀವನ ಮೌಲ್ಯಗಳು ಮನುಕುಲದ ಜೊತೆಗಿವೆ. ಮೌಲ್ಯಾಧಾರಿತ ಜೀವನ ವಿಧಾನಕ್ಕೆ ಯಾವಾಗಲೂ ಶ್ರೇಷ್ಠತೆಯ ಮೆರಗು ಪ್ರಾಪ್ತವಾಗುತ್ತದೆ. ಹೀಗಾಗಿ ಬದುಕಿನಲ್ಲಿ ಮೌಲ್ಯಗಳ ಅನುಪಾಲನೆ ಅಗತ್ಯ ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಅಮ್ಮಿನಬಾವಿ ಹಾಗೂ ಮರೇವಾಡ ಗ್ರಾಮಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 1995-96ನೇ ವರ್ಷದ ಹಳೇ ವಿದ್ಯಾರ್ಥಿಗಳು ಇತ್ತೀಚೆಗೆ ಏರ್ಪಡಿಸಿದ್ದ ಗುರುವಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿಗೆ ಮೌಲ್ಯಗಳ ಅವಶ್ಯಕತೆ ಎಷ್ಟು ಮುಖ್ಯವೋ, ಹಾಗೇ ಗುರುವಿನ ಮಾರ್ಗದರ್ಶನವೂ ಮುಖ್ಯ. ಲೌಕಿಕ ಇಲ್ಲವೇ ಅಲೌಕಿಕ ವಿದ್ಯಾರ್ಜನೆ ಇದ್ದರೂ ಅಲ್ಲಿ ಗುರು ಮುಖೇನ ಕಲಿತ ವಿದ್ಯೆಯು ಪರಿಪೂರ್ಣವಾಗಿರುತ್ತದೆ ಎಂದರು.
ಎಂ.ವಿ. ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಎಸ್​.ಟಿ. ಹಿರೇಮಠ, ಶಿವಾನಂದ ಅಕ್ಕೋಜಿ, ಚೆನ್ನಬಸಪ್ಪ ಮಾಟರ, ಉಮೇಶ ನಡುವಿನಹಳ್ಳಿ, ಶಿವಯೋಗಿ ಚಂದರಗಿ ಇತರರು ಇದ್ದರು.
ಸಂತೋಷ ಕಮತರ ಸ್ವಾಗತಿಸಿದರು. ಶೋಭಾ ಸುಳ್ಳದ ನಿರೂಪಿಸಿದರು. ಶಿವಲೀಲಾ ಹುಲ್ಲೂರ ವಂದಿಸಿದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…