ಡೆಹ್ರಾಡೂನ್: ಪ್ರಸಿದ್ಧ ತೀರ್ಥ ಕ್ಷೇತ್ರ ಬದರಿನಾಥ, ಕೇದಾರನಾಥ ದೇಗುಲ ಸಮಿತಿಗೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಅವರು ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರನ್ನು ನೇಮಕ ಮಾಡಿದ್ದಾರೆ.
ಮುಖೇಶ್ ಅಂಬಾನಿ ಕುಟುಂಬವು ಬದರಿನಾಥ ಮತ್ತು ಕೇದಾರನಾಥ ದೇಗುಲಕ್ಕೆ ನಿಯಮಿತವಾಗಿ ಭೇಟಿ ನೀಡುವ ಸಂಪ್ರದಾಯ ಹೊಂದಿದೆ. ಅಲ್ಲದೆ, ಕೇದಾರನಾಥ ಮತ್ತು ಬದರಿನಾಥ ದೇಗುಲಗಳ ಪುನರ್ ನವೀಕರಣ ಕಾರ್ಯದಲ್ಲಿ ತಾವೂ ಭಾಗಿಯಾಗುವುದಾಗಿ ದೇಗುಲ ಸಮಿತಿಗೆ ಎರಡು ವರ್ಷಗಳ ಹಿಂದೆ ಮುಖೇಶ್ ಪ್ರಸ್ತಾವ ನೀಡಿದ್ದರು.
ತಮ್ಮ ಕುಟುಂಬದಲ್ಲಿ ಯಾವುದಾದರೂ ಮಹತ್ತರ ಬೆಳವಣಿಗೆ ನಡೆಯುವುದಕ್ಕೂ ಮೊದಲು ದೇಗುಲಕ್ಕೆ ಭೇಟಿ ನೀಡುವುದನ್ನು ಮುಖೇಶ್ ರೂಢಿಯಾಗಿಟ್ಟುಕೊಂಡಿದ್ದಾರೆ. ತಮ್ಮ ಪುತ್ರಿಯ ವಿವಾಹಕ್ಕೂ ಮೊದಲು ದೇಗುಲಕ್ಕೆ ಬಂದಿದ್ದ ಅವರು, ಆಶೀರ್ವಾದ ಪಡೆದು ಹೋಗಿದ್ದರು. ನಂತರ, ಆಹ್ವಾನ ಪತ್ರಿಕೆಯನ್ನು ಮೊದಲು ದೇಗುಲಕ್ಕೇ ಸಮರ್ಪಿಸಿದ್ದರು.
ಬದರಿನಾಥ ಮತ್ತು ಕೇದಾರನಾಥದ ಶಿವನ ದೇಗುಲಕ್ಕೆ ಮುಖೇಶ್ ಅಂಬಾನಿ ಕುಟುಂಬ ಅತ್ಯಂತ ವಿದೇಯವಾಗಿ ನಡೆದುಕೊಳ್ಳುವ ಕಾರಣಕ್ಕಾಗಿಯೇ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ಅವರು ಮುಖೇಶ್ ಪುತ್ರ ಅನಂತ್ ಅಂಬಾನಿಯನ್ನು ಸಮಿತಿಗೆ ನೇಮಕ ಮಾಡಿದ್ದಾರೆ ಎನ್ನಲಾಗಿದೆ.