ಯಾವುದೇ ಪದವಿ ಕೊಡಲಿಲ್ಲ, ಹಣವನ್ನೂ ನೀಡಲಿಲ್ಲ; ಆದರೂ ಮಾಡುತ್ತಿದ್ದಾರೆ ಸ್ವಯಂಪ್ರಚಾರ: ಬೆಂಬಲಿಸಿದವರಿಗೆ ಉಪೇಂದ್ರ ಮೆಚ್ಚುಗೆ

ಬೆಂಗಳೂರು: ಹದಗೆಟ್ಟಿರುವ ವ್ಯವಸ್ಥೆಯನ್ನೇ ಸಂಪೂರ್ಣ ಬದಲಿಸುವ ಉದ್ದೇಶದಿಂದ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಾಕಿರುವ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಅಬ್ಬರದ ಪ್ರಚಾರದಿಂದ ದೂರವಿದ್ದರೂ ಸದ್ದಿಲ್ಲದೆ ತನ್ನ ವಿಚಾರದ ಪ್ರಚಾರವನ್ನು ನಾಲ್ಕು ವರ್ಷಗಳಿಂದ ಮಾಡುತ್ತಲೇ ಬಂದಿದೆ. ತಮ್ಮ ಕನಸಿಗೆ ಕೈಜೋಡಿಸುತ್ತಿರುವ ಸಾರ್ವಜನಿಕರಿಗೆ ಆಗಾಗ ಸ್ಪಂದಿಸುವ ಮೂಲಕ ಅವರನ್ನು ಮತ್ತಷ್ಟು ಹುರಿದುಂಬಿಸುವ ಕೆಲಸವನ್ನು ಪಕ್ಷದ ಸಂಸ್ಥಾಪಕ ಉಪೇಂದ್ರ ಮಾಡುತ್ತ ಬಂದಿದ್ದಾರೆ. ಹಣ ಹೂಡದ, ಕಾರ್ಯಕರ್ತರಿರದ ಪಕ್ಷವನ್ನು ಕಟ್ಟಿರುವ ಅವರು, ವಿಚಾರವೇ ಮುಖ್ಯವಾಗಬೇಕು ಎಂಬ ಧ್ಯೇಯದೊಂದಿಗೆ ಪಕ್ಷವನ್ನು ನಡೆಸುತ್ತಿದ್ದಾರೆ. ಇದನ್ನೂ ಓದಿ: ಉಪೇಂದ್ರ … Continue reading ಯಾವುದೇ ಪದವಿ ಕೊಡಲಿಲ್ಲ, ಹಣವನ್ನೂ ನೀಡಲಿಲ್ಲ; ಆದರೂ ಮಾಡುತ್ತಿದ್ದಾರೆ ಸ್ವಯಂಪ್ರಚಾರ: ಬೆಂಬಲಿಸಿದವರಿಗೆ ಉಪೇಂದ್ರ ಮೆಚ್ಚುಗೆ