ಲಖನೌ: 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಡಬಲ್ಡೆಕ್ಕರ್ ಬಸ್ ಉತ್ತರಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಬೆಂಕಿಗಾಹುತಿಯಾಗಿದೆ.
ಕೆಲ ಪ್ರಯಾಣಿಕರು ಬಸ್ ಒಳಗಿದ್ದರು ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ. ಆದರೆ ಸ್ಪಷ್ಟವಾಗಿ ತಿಳಿದಯ ಬರಬೇಕಾದರೆ ಬೆಂಕಿ ನಂದಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಸ್ ಒಳಗೆ ಇರುವವರ ಮೃತ ಪಟ್ಟಿರಬಹುದು. ಒಳಗೆ ಎಷ್ಟು ಜನರಿದ್ದಾರೆ ಹಾಗೂ ಎಷ್ಟು ಮಂದಿಗೆ ಗಾಯಗಲಾಗಿವೆ ಎಂಬುದು ಸ್ಪಷ್ಟವಾಗಿಲ್ಲ. ಖಾಸಗಿ ಬಸ್ ಆಗಿದ್ದು ಎದುರು ಬಂದ ಲಾರಿಗೆ ಡಿಕ್ಕಿ ಹೊಡೆದದ್ದೇ ಬೆಂಕಿ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಸೂಪರ್ ಇನ್ಟೆನ್ಡೆಂಟ್ ಅವರ ಜತೆ ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಹಾರ ಕಾರ್ಯಾವರಣೆ ನಡೆಯುತ್ತಿದ್ದಯ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ವಿಮಲ್ ಬಸ್ ಸರ್ವಿಸ್ ಎಂಬ ಖಾಸಗಿ ಸಂಸ್ಥೆಗೆ ಸೇರಿದ ಬಸ್ಗೆ ಬೆಂಕಿ ಬಿದ್ದಿದ್ದು, ರಾಜಸ್ಥಾನದ ಜೈಪುರದಿಂದ ಲಖನೌಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)