More

    ಉತ್ತರ ಪ್ರದೇಶದ ಕನ್ನೌಜ್​ ಜಿಲ್ಲೆಯಲ್ಲಿ ಲಾರಿಗೆ ಡಿಕ್ಕಿಯಾಗಿ ಹೊತ್ತಿ ಉರಿಯುತ್ತಿರುವ ಖಾಸಗಿ ಬಸ್​; 50 ಜನರಿದ್ದ ಬಸ್​, ಬೆಂಕಿ ನಂದಿಸುವ ಕಾರ್ಯ ಚುರುಕು

    ಲಖನೌ: 50ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದ ಡಬಲ್​ಡೆಕ್ಕರ್​ ಬಸ್​ ಉತ್ತರಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಬೆಂಕಿಗಾಹುತಿಯಾಗಿದೆ.

    ಕೆಲ ಪ್ರಯಾಣಿಕರು ಬಸ್​ ಒಳಗಿದ್ದರು ಎಂದು ಪ್ರಾಥಮಿಕ ಮಾಹಿತಿ ದೊರೆತಿದೆ. ಆದರೆ ಸ್ಪಷ್ಟವಾಗಿ ತಿಳಿದಯ ಬರಬೇಕಾದರೆ ಬೆಂಕಿ ನಂದಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

    ಅಗ್ನಿ ಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಸ್​ ಒಳಗೆ ಇರುವವರ ಮೃತ ಪಟ್ಟಿರಬಹುದು. ಒಳಗೆ ಎಷ್ಟು ಜನರಿದ್ದಾರೆ ಹಾಗೂ ಎಷ್ಟು ಮಂದಿಗೆ ಗಾಯಗಲಾಗಿವೆ ಎಂಬುದು ಸ್ಪಷ್ಟವಾಗಿಲ್ಲ. ಖಾಸಗಿ ಬಸ್​ ಆಗಿದ್ದು ಎದುರು ಬಂದ ಲಾರಿಗೆ ಡಿಕ್ಕಿ ಹೊಡೆದದ್ದೇ ಬೆಂಕಿ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜಿಲ್ಲಾಧಿಕಾರಿ ಮತ್ತು ಪೊಲೀಸ್​ ಸೂಪರ್​ ಇನ್​ಟೆನ್​ಡೆಂಟ್​ ಅವರ ಜತೆ ಸ್ಥಳಕ್ಕೆ ಆಗಮಿಸಿದ್ದಾರೆ. ಪರಿಹಾರ ಕಾರ್ಯಾವರಣೆ ನಡೆಯುತ್ತಿದ್ದಯ ಅದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

    ವಿಮಲ್​ ಬಸ್​ ಸರ್ವಿಸ್​ ಎಂಬ ಖಾಸಗಿ ಸಂಸ್ಥೆಗೆ ಸೇರಿದ ಬಸ್​ಗೆ ಬೆಂಕಿ ಬಿದ್ದಿದ್ದು, ರಾಜಸ್ಥಾನದ ಜೈಪುರದಿಂದ ಲಖನೌಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts