More

    ದೇಶ ತುಂಡಾಗಬೇಕು ಎನ್ನುವರ ಜತೆ ನಿಂತ ದೀಪಿಕಾ ಪಡುಕೋಣೆ; ಹಾಗಾದರೆ ಅವರ ರಾಜಕೀಯ ನಿಲುವೇನು ಸಚಿವೆ ಸ್ಮೃತಿ ಇರಾನಿ

    ನವದೆಹಲಿ: ನಟಿ ದೀಪಿಕಾ ಪಡುಕೋಣೆ ದೇಶ ಒಡೆಯುವವರ ಜತೆ ನಿಂತಿದ್ದಾರೆ. ಹಾಗಾದರೆ ಅವರ ರಾಜಕೀಯ ನಿಲುವೇನು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೀಪಿಕಾ ಅವರ ರಾಜಕೀಯ ಸಂಬಂಧ ಏನು? ಏಕೆಂದರೆ ಜೆಎನ್​ಯು ವಿದ್ಯಾರ್ಥಿಗಳ ಜತೆ ಅವರು ಭಾಗವಹಿಸಿದ್ದರ ಸುದ್ದಿ ತಿಳಿದವರಿಗೆ ಸ್ಪಷ್ಟತೆ ಬೇಕಿದೆ. ಭಾರತ ದೇಶ ತುಂಡಾಗಬೇಕು ಎಂದವರ ಜತೆ ನಿಲ್ಲುವ ಸ್ವಾತಂತ್ರ್ಯ ನಟಿ ದೀಪಿಕಾ ಅವರಿಗಿದೆ ಎಂದರು.

    ನಾನು ಅವರ ಹಕ್ಕನ್ನು ವಿರೋಧಿಸುವುದಿಲ್ಲ. 2011ರಲ್ಲಿ ಅವರು ಕಾಂಗ್ರೆಸ್​ನ್ನು ಬೆಂಬಲಿಸಿದ್ದರು. ಇದು ಯಾರಿಗಾದರೂ ಅಚ್ಚರಿಯಾಗಿದ್ದರೆ. ಕಾಂಗ್ರೆಸ್​ಗೆ ಬೆಂಬಲಿಸಿದ್ದ ಸುದ್ದಿ ಅವರಿಗೆ ತಿಳಿದಿರಲಿಕ್ಕಿಲ್ಲ ಎಂದರು.

    ಅಸ್ಸಾಂ ರಾಜ್ಯದ ಸಚಿವ ಹಿಮಂತ್​ ಬಿಸ್ವಾಸ್​ ಶರ್ಮಾ, ದೀಪಿಕಾ ಅವರು ತಮ್ಮ ಚಪಾಕ್​ ಸಿನಿಮಾದ ಪ್ರಚಾರಕ್ಕಾಗಿ ಹೋಗಿದ್ದರು. ಸಿನಿಮಾ ನಟ-ನಟಿಯರಿಗೆ ಜನರಿದ್ದಲ್ಲಿಗೆ ಹೋಗುವುದು, ಸಮಸ್ಯೆಗಳನ್ನು ಸೃಷ್ಟಿಸುವುದು ಹವ್ಯಾಸವಾಗಿರುತ್ತದೆ ಎಂದು ವ್ಯಂಗ್ಯವಾಡಿದರು.

    ಕಳೆದ ಮಂಗಳವಾರ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ವಿವಿಗೆ ಭೇಟಿ ಕೊಟ್ಟಿದ್ದರು. 15 ನಿಮಿಷಗಳ ಕಾಲ ಅಲ್ಲಿನ ಸಭೆಯಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts