ಮದ್ಯದ ಮತ್ತಿನಲ್ಲಿ ಚಿಕ್ಕಪ್ಪನನ್ನೇ ಕೊಂದ

blank

ಕಾರ್ಕಳ: ಅಜೆಕಾರು ಶಿರ್ಲಾಲು ಹಾಡಿಯಂಗಡಿಯಲ್ಲಿ ಕುಡಿತದ ಮತ್ತಿನಲ್ಲಿ ಚಿಕ್ಕಪ್ಪನನ್ನು ಬಡಿದು ಕೊಂದ ಆರೋಪಿಯನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.

ಶಿರ್ಲಾಲು ಹಾಡಿಯಂಗಡಿಯ ನಿವಾಸಿ ಆನಂದ ಸೇರ್ವೆಗಾರ್ (62) ಕೊಲೆಗೀಡಾದವರು. ಪತ್ನಿಯ ಅಕ್ಕನ ಮಗ ಕೆರ್ವಾಸೆಯ ಹರೀಶ್ (28) ಕೊಲೆ ಆರೋಪಿ.
ಮೂವತ್ತು ವರ್ಷಗಳಿಂದ ಹಾಡಿಯಂಗಡಿಯಲ್ಲಿ ನೆಲೆಸಿರುವ ಆನಂದ ಸೇರ್ವೆಗಾರ್‌ಗೆ ನಾಲ್ಕು ಎಕರೆ ಜಾಗ ಇತ್ತು. ಕೃಷಿಯನ್ನೇ ಅವಲಂಬಿಸಿ ಸಂಸಾರ ನಡೆಸುತ್ತಿದ್ದ ಅವರು ಮದ್ಯವ್ಯಸನಕ್ಕೆ ಒಳಗಾಗಿ ಸಾಲಗಾರನಾಗಿದ್ದರು. ಜನವರಿಯಲ್ಲಿ ಜಮೀನನ್ನು ಗಣೇಶ್ ರಾವ್ ಎಂಬುವರಿಗೆ ಮಾರಾಟ ಮಾಡಿದ್ದರು. ಜಾಗದ ಮಾಲೀಕರ ಅನುಮತಿಯೊಂದಿಗೆ ಆ ಬಳಿಕವೂ ಅದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಪತ್ನಿ ಹಾಗೂ ಮಕ್ಕಳು ಬೇರೆಡೆಯಲ್ಲಿ ವಾಸವಾಗಿದ್ದರು.

ಆರೋಪಿ ಹರೀಶ್ ಕೆಲ ತಿಂಗಳುಗಳಿಂದ ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಹೊಂದಿರುವ ಈತ ಮೇ 19 ರಾತ್ರಿ ಆನಂದ ಸೇರ್ವೇಗಾರ್ ಹಾಗೂ ಹರೀಶ್ ನಡುವೆ ವಾಗ್ವಾದ ಉಂಟಾದ ಜಗಳ ತಾರಕ್ಕೇರಿದೆ. ಈ ವೇಳೆ ಹರೀಶ್ ಮರದ ಸೋಂಟೆಯಿಂದ ತಲೆಗೆ ಬಡಿದ ಪರಿಣಾಮ ಆನಂದ ಸೇರ್ವೇಗಾರ್ ತೀವ್ರ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…