ಶಾಸಕ ಯಶ್ಪಾಲ್ ಸುವರ್ಣ ಮಾಹಿತಿ
ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಉಡುಪಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಮಿಷನ್ ಕಾಂಪೌಂಡ್ ರಸ್ತೆಗೆ ಕಾಂಕ್ರೀಟಿಕರಣ ಹಾಗೂ ಚರಂಡಿ ಕಾಮಗಾರಿಗೆ ನಗರಸಭೆ ವತಿಯಿಂದ 66 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ಕಾಮಗಾರಿ ಶ್ರೀ ಪೂರ್ಣಗೊಂಡು ಈ ಭಾಗದ ಜನತೆಯ ಬಹುದಿನದ ಬೇಡಿಕೆ ಈಡೇರಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಸಂತಸ ವ್ಯಕ್ತಪಡಿಸಿದರು.

ಉಡುಪಿ ನಗರಸಭೆ ವತಿಯಿಂದ ನಡೆಯಲಿರುವ ಬೈಲೂರು ಮಿಷನ್ ಕಾಂಪೌಂಡ್ ಜಂಕ್ಷನ್ ರಸ್ತೆ ಕಾಂಕ್ರೀಟಿಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಮಾ.31ರಂದು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜಿನಿ ಹೆಬ್ಬಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ನಗರಸಭಾ ಮಾಜಿ ಅಧ್ಯಕ್ಷ ಕಿರಣಕುಮಾರ್ ಬೈಲೂರು, ನಗರಸಭಾ ಸದಸ್ಯರಾದ ಕೃಷ್ಣ ರಾವ್ ಕೊಡಂಚ, ಬಾಲಕೃಷ್ಣ ಶೆಟ್ಟಿ, ಹರೀಶ ಶೆಟ್ಟಿ, ವಿಜಯಲಕ್ಷಿ$್ಮ, ಸ್ಥಳಿಯ ಮುಖಂಡರಾದ ರಂಜಿತ ದೇವಾಡಿಗ, ಅರುಣಕುಮಾರ್, ದುರ್ಗಾಪ್ರಸಾದ, ಸುನೀಲ, ಪ್ರಮೋದ ಆಚಾರ್ಯ, ಸುರೇಶ ಶೆಟ್ಟಿ, ನಾರಾಯಣದಾಸ ಉಡುಪ, ನವೀವ ನಿಶ್ಚಲ, ವೆಂಕಟೇಶ ಪ್ರಭು, ರತ್ನಾಕರ ಜಿ.ಎಸ್., ಶಾಂತಾ ಶೇರಿಗಾರ್, ಶ್ರೀಪತಿ ಭಟ್ ಇತರರಿದ್ದರು.