ಇಬ್ಬರು ರೌಡಿಗಳಿಗೆ 1 ತಿಂಗಳವರೆಗೆ ಗಡಿಪಾರು; ಚೌತಿ ಸಂದರ್ಭ ಶಾಂತಿಭಂಗ ಸಾಧ್ಯತೆ ಹಿನ್ನೆಲೆಯಲ್ಲಿ ಕ್ರಮ

ಶಿವಮೊಗ್ಗ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಭಂಗಕ್ಕೆ ಯತ್ನಿಸುವ ಶಂಕೆ ಮೇಲೆ ಇಬ್ಬರು ರೌಡಿಶೀಟರ್ ಗಳನ್ನು ಒಂದು ತಿಂಗಳವರೆಗೆ ಗಡಿಪಾರು ಮಾಡಿ ಗುರುವಾರ ಶಿವಮೊಗ್ಗ ಎಸಿ ಎಸ್.ಬಿ.ದೊಡ್ಡೇಗೌಡರ್ ಆದೇಶಿಸಿದ್ದಾರೆ. ಆಶ್ರಯ ಬಡಾವಣೆಯ ಶಮಂತ ಅಲಿಯಾಸ್ ಶಮಂತ ನಾಯ್ಕ (29)ಮತ್ತು ಸಂದೀಪ್ ಅಲಿಯಾಸ್ ಸಂದೀಪ್ ಕುಮಾರ್ (29) ಗಡಿಪಾರು ಆದವರು. ಇವರು ಕಾನೂನು, ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆ ಪ್ರದರ್ಶಿಸುತ್ತ, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿ ಅಪರಾಧ ಕೃತ್ಯಗಳನ್ನೆಸಗಿ ದುರ್ನಡತೆ ಮುಂದುವರಿಸಿಕೊಂಡು … Continue reading ಇಬ್ಬರು ರೌಡಿಗಳಿಗೆ 1 ತಿಂಗಳವರೆಗೆ ಗಡಿಪಾರು; ಚೌತಿ ಸಂದರ್ಭ ಶಾಂತಿಭಂಗ ಸಾಧ್ಯತೆ ಹಿನ್ನೆಲೆಯಲ್ಲಿ ಕ್ರಮ