ಬೆಂಗಳೂರು: ಬೆಳಗಾವಿಯಿಂದ ತಿರುಪತಿ, ಮೈಸೂರು ಮತ್ತು ಹೈದರಾಬಾದ್ಗೆ ಪ್ರತಿದಿನ ವಿಮಾನಗಳು ಹಾರಾಟ ನಡೆಸಲಿವೆ.
ಬೆಂಗಳೂರು ಮೂಲದ ಟ್ರೂ ಜೆಟ್ ಸಂಸ್ಥೆಯು ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಿದೆ. ಇದು ಕೇಂದರ ಸರ್ಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯಿಂದ ಸಾಧ್ಯವಾಗಿದೆ.
ಸಂಸ್ಥೆಯು ಬೆಳಗಾವಿಯಿಂದ ತಿರುಪತಿ, ಮೈಸೂರು ಮತ್ತು ಹೈದರಾಬಾದ್ಗೆ ಪ್ರತಿದಿನ ಆರು ವಿಮಾನಗಳ ಮೂಲಕ ಹಾರಾಟ ನಡೆಸಲಿದೆ. 72 ಆಸಗಳ ಸಾಮಥ್ಯವುಳ್ಳ ವಿಮಾನಗಳು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಟ್ರೂ ಜೆಟ್ ಸಂಸ್ಥೆಯು ಉಡಾನ್ ಯೋಜನೆಯಡಿ ಈಗಾಗಲೇ 32 ವಿಮಾನಗಳನ್ನು ಕಾರ್ಯನಿರತಗೊಳಿಸಿದೆ. ಈಗ ಈ ಮೂರು ವಿಮಾನಗಳ ಹಾರಾಟಕ್ಕೆ ಚಾಲನೆ ನೀಡುವ ಮೂಲಕ ಒಟ್ಟು 38 ವಿಮಾನಗಳು ಹಾರಾಟ ನಡೆಸುತ್ತಿವೆ.
ಉಡಾನ್ ಯೋಜನೆಯ ಮೂರನೇ ಹಂತದಲ್ಲಿ ಈ ವಿಮಾನ ಯಾನ ಸೇವೆಯನ್ನು ಆರಂಭಿಸಲಾಗಿದೆ. 2017ರಲ್ಲಿ ಉಡಾನ್ ಯೋಜನೆ ಜಾರಿಯಾಗಿತ್ತು. ಟ್ರೂ ಜೆಟ್ ಸಂಸ್ಥೆಯು ಏಪ್ರಿಲ್ 2015ರಿಂದ ವಿಮಾನ ಯಾನ ಸೇವೆ ಆರಂಭಿಸಿತ್ತು. (ಏಜೆನ್ಸೀಸ್)