blank

ತ್ರಿಪಿಟಕ ಪಠಣ ಮಹೋತ್ಸವ 12ರಂದು

blank

ದೇವದುರ್ಗ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿಯಲ್ಲಿ (ಕನಗನಹಳ್ಳಿ) ಫೆ.12ರಂದು ಐತಿಹಾಸಿಕ ಪವಿತ್ರ ತ್ರಿಪಿಟಕ ಪಠಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಧಮ್ಮದೀಪ ಚಾಲನಾ ಸಮಿತಿ ತಾಲೂಕು ಸಂಚಾಲಕ ಮಲ್ಲೇಶಪ್ಪ ಹುನಗುಂದಬಾಡ ತಿಳಿಸಿದರು.

ಇದನ್ನೂ ಓದಿ: ಕತ್ತಲೆ ಹೊಡೆದೊಡಿಸಲು ಬೆಳಕು ಬೇಕು

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಮಹಾಬೋಧಿ ಸೊಸೈಟಿ, ಲೈಟ್‌ಆಫ್ ದಿ ಬುದ್ಧ ಧಮ್ಮ ಪ್ರತಿಷ್ಠಾನ, ಅಂತಾರಾಷ್ಟ್ರೀಯ ತ್ರಿಪಿಟಕ ಪರಿಷತ್ ಮತ್ತು ಬೌದ್ಧ ಮಹಾಸ್ತೂಪ ಅಭಿವೃದ್ಧಿ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರಂಭದಲ್ಲಿ ದೇಶ, ವಿದೇಶದ 108 ಬೌದ್ಧ ಬಿಕ್ಕುಗಳು ಭಾಗವಹಿಸಲಿದ್ದಾರೆ.

ಹಲವು ವರ್ಷಗಳ ನಂತರ ಪವಿತ್ರ ತ್ರಿಪಿಟಕ ಪಠಣ, ಬುದ್ಧನ ಬೋಧನೆಗಳನ್ನು ಪಾಲಿ ಭಾಷೆಯಲ್ಲಿ ಪಠಣ ಮಾಡಲಾಗುತ್ತಿದೆ. ಜಗತ್ತಿಗೆ ಶಾಂತಿ, ಸಹಬಾಳ್ವೆ, ಭ್ರಾತೃತ್ವ ಸಂದೇಶ ಸಾರಲಾಗುವುದು. ಅಂದು ಬೆಳಗ್ಗೆ 10ಗಂಟೆಗೆ ಮಹಾದ್ವಾರದಿಂದ ಬೌದ್ಧ ಮಹಾಸ್ತೂಪದವರೆಗೆ ಧಮ್ಮ ಜಾಥಾ ಆಯೋಜಿಸಲಾಗಿದೆ.

11ಗಂಟೆಗೆ ಸಂಘದಾನ ಬಿಕ್ಕುಗಳಿಗೆ ಆಹಾರ ದಾನ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ ಮಹಾಭೋಜನ, ಮಧ್ಯಾಹ್ನ 12.30ರಿಂದ 3 ಗಂಟೆವರೆಗೆ ಪವಿತ್ರ ತ್ರಿಪಿಟಕ ಪಠಣ, 3ರಿಂದ 4ರವರೆಗೆ ಧಮ್ಮ ಪ್ರಚಾರ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು. ಪ್ರಮುಖರಾದ ನರಸಪ್ಪ ಚಿಂಚೋಡಿ ವಕೀಲ, ಮಹಾಂತೇಶ ಭವಾನಿ, ಮಲ್ಲಿಕಾರ್ಜುನ ಮಸರಕಲ್, ತಮ್ಮಣ್ಣ ವಕೀಲ, ಬೊಮ್ಮನಾಳ, ರಾಮಣ್ಣ ಭವಾನಿ ಇದ್ದರು.

 

Share This Article

ಮನೆಯಲ್ಲೇ ಮಾಡಿ ಟೇಸ್ಟಿ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ಸಿಂಪಲ್​ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪ್ಪಿನಕಾಯಿ ಇಲ್ಲದೆ ಊಟ ಸಂಪೂರ್ಣ ಎನ್ನಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ…

ಪ್ರತಿದಿನ 1 ದಾಳಿಂಬೆ ಸೇವನೆಯಿಂದಾಗುವ ಪ್ರಯೋಜನಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ದಾಳಿಂಬೆ ಪೋಷಕಾಂಶಗಳಿಂದ ತುಂಬಿದೆ ಎಂಬುದು ಮುಚ್ಚಿಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬರೂ ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು…

ಧೂಮಪಾನ ಬಿಡಲು ಮನಸ್ಸಿದ್ದರೂ ಸಾಧ್ಯವಾಗುತ್ತಿಲ್ಲವೇ?; ನಿಮಗಾಗಿಯೇ ಈ ಟ್ರಿಕ್ಸ್​ | Health Tips

ಪ್ರತ್ಯಕ್ಷವಾಗೋ ಅಥವಾ ಪರೋಕ್ಷವಾಗೋ ನಾವೆಲ್ಲರೂ ನಿಷ್ಕ್ರಿಯ ಧೂಮಪಾನಿಗಳು. ಏಕೆಂದರೆ ನಮ್ಮ ಸುತ್ತಲೂ ಯಾವಾಗಲೂ ಯಾರಾದರೂ ಸಿಗರೇಟ್…