ಹಿಂದಿನಿಂದ ಯಮರೂಪದಲ್ಲಿ ಬಂದು ಡಿಕ್ಕಿ ಹೊಡೆದ ರೈಲು! ತಾಯಿ ಮಗ ಸ್ಥಳದಲ್ಲೇ ಸಾವು

ಬೆಂಗಳೂರು: ಸಂಜಯ್‌ನಗರದ ಬಳಿ ರೈಲ್ವೆ ಹಳಿ ದಾಡುತ್ತಿದ್ದಾಗ ತಾಯಿ-ಮಗನ ಮೇಲೆ ರೈಲು ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೊಡ್ಡಬ್ಯಾಲದ ಕರೆ ನಿವಾಸಿಗಳಾದ ಹರೀಶ್ (30), ಮಂಗಳಮ್ಮ (50) ಮೃತಪಟ್ಟವರು. ಮಂಗಳಮ್ಮ ದೊಡ್ಡಬ್ಯಾಲದ ಕರೆಯಲ್ಲಿ ಬಳೆ ಅಂಗಡಿ ಹೊಂದಿದ್ದಾರೆ. ಇವರ ಅಳಿಯ ಸಂಜಯ್‌ನಗರದಲ್ಲಿ ಅಂಗಡಿ ಹೊಂದಿದ್ದು, ಭಾನುವಾರ ಮುಂಜಾನೆ ಅಳಿಯನ ಮನೆಗೆ ಮಗ ಹರೀಶ್ ಜತೆ ಹೊರಟಿದ್ದರು. ಬೆಳಗ್ಗೆ 5.45ರಲ್ಲಿ ಸಂಜಯ್ ನಗರಕ್ಕೆ ಬಸ್‌ನಲ್ಲಿ ಬಂದು ಭದ್ರಪ್ಪ ಲೇಔಟ್ ಬಳಿ ಇಳಿದು ಪಕ್ಕದಲ್ಲಿದ್ದ ರೈಲ್ವೆ ಅಂಡರ್‌ಪಾಸ್‌ನ ರೈಲ್ವೆ ಹಳಿ … Continue reading ಹಿಂದಿನಿಂದ ಯಮರೂಪದಲ್ಲಿ ಬಂದು ಡಿಕ್ಕಿ ಹೊಡೆದ ರೈಲು! ತಾಯಿ ಮಗ ಸ್ಥಳದಲ್ಲೇ ಸಾವು