ಪುತ್ತೂರು: ಶತಮಾನಕ್ಕೂ ಮಿಕ್ಕಿದ ಇತಿಹಾಸವಿರುವ ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಆಡಳಿತ ಮಂಡಳಿಯ ೧೩ ನಿರ್ದೇಶಕರ ಸ್ಥಾನಗಳಲ್ಲಿ ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಸಾಮಾನ್ಯ ಕ್ಷೇತ್ರದಲ್ಲಿ ಕಿಶೋರ್ ಕೊಳತ್ತಾಯ (೧೪೪೯), ರಾಜು ಶೆಟ್ಟಿ (೧೨೩೦), ಶ್ರೀಧರ್ ಪಟ್ಲ (೧೨೨೭), ಚಂದ್ರಶೇಖರ್ ರಾವ್ ಬಪ್ಪಳಿಗೆ (೧೨೦೦), ಸುಜೀಂದ್ರ ಪ್ರಭು (೧೧೬೫), ಶ್ರೀಧರ ಗೌಡ (೧೧೬೪), ರಾಮಚಂದ್ರ ಕಾಮತ್ (೧೧೫೯), ಹಿಂದುಳಿದ ವರ್ಗ ’ಎ’ ಮಲ್ಲೇಶ್ ಕುಮಾರ್ (೧೦೭೩), ಹಿಂದುಳಿದ ವರ್ಗ ’ಬಿ’ ಕಿರಣ್ ಕುಮಾರ್ ರೈ (೧೧೬೧), ಮಹಿಳಾ ಮೀಸಲು ವೀಣಾ (೧೨೩೩), ಸೀಮಾ ಎಂ.ಎ (೧೨೧೨), ಪರಿಶಿಷ್ಟ ಜಾತಿ ಗಣೇಶ್ ಕೌಕ್ರಾಡಿ (೧೩೩೦) ಆಯ್ಕೆಯಾಗಿದ್ದಾರೆ.
ಬಿಜೆಪಿಯು ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಚುನಾವಣೆಯಲ್ಲಿ ಬಂಡಾಯ ಎದುರಿಸಿತ್ತು. ಈ ಹಿಂದಿನ ನಿರ್ದೇಶಕ ಸದಾಶಿವ ಪೈ, ಸುದರ್ಶನ್ ಬಂಡಾಯ ಸರ್ಧಾಳುಗಳಾಗಿ ಕಣದಲ್ಲಿದ್ದರು. ಅದಲ್ಲದೆ ೭ ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದರು.