ಗದ್ದೆಯಲ್ಲಿ ಮೂರು ಕಾಡುಬೆಕ್ಕಿನ ಮರಿ ಪತ್ತೆ

blank

ನರಗುಂದ: ಕಬ್ಬಿನ ಗದ್ದೆಯಲ್ಲಿ ಆಶ್ರಯ ಪಡೆದಿದ್ದ ಮೂರು ಕಾಡು ಬೆಕ್ಕಿನ ಮರಿಗಳನ್ನು ಸಂರಕ್ಷಿಸಿ ತಾಯಿ ಬೆಕ್ಕಿನೊಂದಿಗೆ ಸೇರ್ಪಡೆಗೊಳಿಸಿರುವ ಕಾರ್ಯವನ್ನು ಸಮೀಪದ ಹೊಳೆ ಹಡಗಲಿ ರೈತರಿಬ್ಬರು ಮಾಡಿದ್ದಾರೆ.
ಗ್ರಾಮದ ಭೀಮಪ್ಪ ಹೂಗಾರ ಹಾಗೂ ನಿಂಗನಗೌಡ ಕೆಂಚನಗೌಡ್ರ ಅವರ ಜಮೀನಿನಲ್ಲಿ ಕಬ್ಬಿನ ಕಟಾವು ಮಾಡುತ್ತಿದ್ದಾಗ ಮೂರು ಕಾಡು ಬೆಕ್ಕಿನ ಮರಿಗಳು ಪತ್ತೆಯಾಗಿದ್ದವು. ಮರಿಗಳನ್ನು ಕಂಡ ಭೀಮಪ್ಪ ಅವರು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಅವರಿಗೆ ಮಾಹಿತಿ ನೀಡಿದ್ದಾರೆ. ಮಂಜುನಾಥ ಅವರು ರೋಣ ಉಪವಲಯ ಅರಣ್ಯಾಧಿಕಾರಿ ಅನ್ವರ ಕೋಲ್ಹಾರ, ವನ್ಯಜೀವಿ ಸಂಶೋಧಕ ಹಾಗೂ ಛಾಯಾಗ್ರಾಹಕ ಸಂಗಮೇಶ ಕಡಗದ ಅವರೊಂದಿಗೆ ಕಬ್ಬಿನ ಗದ್ದೆಗೆ ಆಗಮಿಸಿ, ಬೆಕ್ಕಿನ ಮರಿಗಳನ್ನು ಅವುಗಳ ತಾಯಿ ಬಂದು ಒಂದೊಂದಾಗಿ ತನ್ನ ಮರಿಗಳನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗುವಂತೆ ಮಾಡುವಲ್ಲಿ ಯಶಸ್ವಿಯಾದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…