ಕೂದಲೆಳೆ ಅಂತರದಲ್ಲಿ ಮೂವರು ಪಾರು

blank

ಶ್ರೀರಂಗಪಟ್ಟಣ : ತಾಲೂಕಿನ ಅರಕೆರೆ ಗ್ರಾಮದಲ್ಲಿ ಬೈಕ್‌ಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಮೂವರು ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಕೆನರಾ ಬ್ಯಾಂಕಿನ ಸಮೀಪದ ಅರಕೆರೆ-ತಡಗವಾಡಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಈ ಅಪಘಾತದ ಅಘಾತಕಾರಿ ದೃಶ್ಯ ಸಮೀಪದ ಕಟ್ಟಡವೊಂದರಲ್ಲಿ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿ ನೋಡುವವರ ಎದೆ ನಡುಗಿಸುವಂತಿದೆ.
ತಾಲೂಕಿನ ತಡಗವಾಡಿ ಗ್ರಾಮದ ದೇವೇಗೌಡ (58) ತಮ್ಮ ಪತ್ನಿಯೊಂದಿಗೆ ಅರಕೆರೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ತಮ್ಮ ಮುಂದೆ ಕಿರಿದಾದ ತಿರುವು ರಸ್ತೆಯಲ್ಲಿ ಚಲಿಸುತ್ತಿದ್ದ ಜೆಸಿಬಿ ವಾಹನವನ್ನು ಹಿಂದಿಕ್ಕಿ ಅತಿ ವೇಗದಲ್ಲಿ ಮುನ್ನುಗ್ಗುವ ಭರದಲ್ಲಿದ್ದರು. ಈ ವೇಳೆ ತಡಗವಾಡಿ ಕಡೆಯಿಂದ ಅರಕೆರೆ ಆಗಮಿಸುತ್ತಿದ್ದ ಪೂಜಾರಿ ತಮ್ಮೇಗೌಡ ತಮ್ಮ ಬೈಕನ್ನು ನಿಯಂತ್ರಿಸಲಾಗದೆ ಎದುರಿಗೆ ಆಗಮಿಸಿದ ಬೈಕಿಗೆ ಮುಖಾಮುಖಿ ಡಿಕ್ಕಿಯಾಗಿ ಮೂವರು ರಸ್ತೆಗೆ ಒಮ್ಮೆಲೆ ಅಪ್ಪಳಿಸಿ ಬಿದ್ದರು. ಅಚಾನಕ್ ಹಿಂಬದಿ ಆಗಮಿಸುತ್ತಿದ್ದ ಜೆಸಿಬಿ ವಾಹನ ಏಕಾಏಕಿ ರಸ್ತೆಯಲ್ಲಿ ಬಿದ್ದ ದೇವೇಗೌಡ ಅವರ ತಲೆಯ ಕೂದಲೆಳೆ ಅಂತರದಲ್ಲೇ ಸಾಗಿ ಮುಂದೆ ಹೋಗಿದೆ.
ಅಪಘಾತದಿಂದ ದೇವೇಗೌಡ ರಸ್ತೆಗೆ ಅಪ್ಪಳಿಸಿದ ಬಿದ್ದ ಕಾರಣ ತಲೆಗೆ ಗಂಭೀರ ಪೆಟ್ಟಾಗಿ ನಿತ್ರಾಣಗೊಂಡು ಬಿದ್ದಿದ್ದರು. ಮತ್ತೊಂದು ಬೈಕಿನ ಸವಾರ ತಮ್ಮೇಗೌಡ ಸೇರಿದಂತೆ ಇಬ್ಬರನ್ನು ಸ್ಥಳಿಯರ ನೆರವಿನಿಂದ ಮಂಡ್ಯದ ಮಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ದೇವೇಗೌಡ ಅವರ ಪತ್ನಿ ಸಣ್ಣ-ಪುಟ್ಟ ಗಾಯಗಳಿಂದ ಬಚಾವಾಗಿದ್ದು, ಅಪಘಾತದ ತೀವ್ರತೆ ಕಂಡು ಆತಂಕಕ್ಕೆ ಒಳಗಾಗಿದ್ದಾರೆ.
ಘಟನಾ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದರು. ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…