Hardik Pandya: ಇಂದಿನಿಂದ ಐಪಿಎಲ್ 18ನೇ ಆವೃತ್ತಿ ಪುನಾರಂಭಗೊಳ್ಳಲಿದ್ದು, ಮೊದಲ ಪಂದ್ಯ ಆರ್ಸಿಬಿ ಮತ್ತು ಕೆಕೆಆರ್ ನಡುವೆ ನಡೆಯಲಿದೆ. ಭಾರತ-ಪಾಕ್ ಘರ್ಷಣೆಯಿಂದ ರದ್ದಾಗಿದ್ದ ಐಪಿಎಲ್ ಟೂರ್ನಿ, ಇಲ್ಲಿಗೆ ಮುಗಿಯಿತು ಎಂದೇ ಕ್ರಿಕೆಟ್ ಪ್ರಿಯರು ಭಾವಿಸಿದ್ದರು. ಆದರೆ, ಇದಕ್ಕೆ ಗೆಲುವಿನ ಮೂಲಕ ಪೂರ್ಣವಿರಾಮ ಘೋಷಿಸಲು ನಿರ್ಧರಿಸಿದ ಬಿಸಿಸಿಐ, ಇದೀಗ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಿರುವುದು ಐಪಿಎಲ್ ಫ್ಯಾನ್ಸ್ಗಳಲ್ಲಿ ಉತ್ಸಾಹ ಹೆಚ್ಚಿಸಿದೆ.

ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್, 18ನೇ ಆವೃತ್ತಿಯಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದೆ. ಟೂರ್ನಿಯ ಆರಂಭದಲ್ಲಿ ಸರಣಿ ಸೋಲಿನಿಂದ ಕಂಗೆಟ್ಟಿದ್ದ ಎಂ ತಂಡ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸತತ ಗೆಲುವಿನ ಮೂಲಕ ಇದೀಗ ಪ್ಲೇಆಫ್ಗೆ ಎರಡೇ ಹೆಜ್ಜೆಗಳಿಂದ ದೂರ ಉಳಿದಿದೆ. ಈ ಮಧ್ಯೆ ಟೀಮ್ ಇಂಡಿಯಾ ದಿಗ್ಗಜ, ಹಿರಿಯ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿ, ಮುಂಬೈ ಗೆಲುವಿನ ಹಿಂದಿರುವ ಕಾರಣ ಬಹಿರಂಗಪಡಿಸಿದ್ದಾರೆ.
ಈ ಸೀಸನ್ ಮುಂಬೈ ಇಂಡಿಯನ್ಸ್ ಭರ್ಜರಿ ಕಮ್ಬ್ಯಾಕ್ ಮಾಡಿದೆ. ಹಾರ್ದಿಕ್ ಸಾಕಷ್ಟು ಕಲಿತಿದ್ದಾರೆ. ತಮ್ಮ ತಂಡದ ಸದಸ್ಯರು ಮಿಸ್ಫೀಲ್ಡ್ ಮತ್ತು ಕ್ಯಾಚ್ ಬಿಟ್ಟಾಗಲೂ ಬೇಸರಗೊಳ್ಳದ ಪಾಂಡ್ಯ, ಎಲ್ಲಿಯೂ ಭಾವನೆಯನ್ನು ಬಿಟ್ಟುಕೊಟ್ಟಿಲ್ಲ. ಕ್ಯಾಪ್ಟನ್ ಆಗಿ ಆಟಗಾರರ ಮೇಲೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದರೆ, ಅದು ಆಟಗಾರರ ಮೇಲೆ ಮಾತ್ರವಲ್ಲದೇ ಪಂದ್ಯದ ಮೇಲೂ ಪ್ರಭಾವ ಬೀರುತ್ತದೆ. ಆದರೆ, ಹಾರ್ದಿಕ್ ಆ ರೀತಿ ಎಲ್ಲಿಯೂ ನಡೆದುಕೊಂಡಿಲ್ಲ. ಇದು ಅವರ ಅದ್ಭುತ ಗೆಲುವಿಗೆ ಒಂದು ಕಾರಣ ಎಂದರು.
“ಈ ಬಾರಿಯ ಐಪಿಎಲ್ನಲ್ಲಿ ಹಾರ್ದಿಕ್ಗೆ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಕ್ಕಿದೆ. ಆದರೆ, ಕಳೆದ ವರ್ಷ ಕ್ರಿಕೆಟ್ ಪ್ರಿಯರು ಮತ್ತು ಅಭಿಮಾನಿಗಳು ಅವರನ್ನು ಬೆಂಬಲಿಸಲಿಲ್ಲ. ಇದು ಪಾಂಡ್ಯ ಮನಸ್ಥಿತಿಯನ್ನು ಕುಗ್ಗಿಸಿತ್ತು. ಆದರೆ, ಈ ವರ್ಷ ಪರಿಸ್ಥಿತಿ ಬದಲಾಗಿದೆ. ಅಭಿಮಾನಿಗಳ ಸಂಪೂರ್ಣ ಬೆಂಬಲ ಹಾರ್ದಿಕ್ಗೆ ಲಭಿಸಿದೆ. ಅಂತೆಯೇ, ಹಾರ್ದಿಕ್ ಕೂಡ ತಮ್ಮ ಬ್ಯಾಟ್ ಮತ್ತು ಬೌಲಿಂಗ್ನಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಫ್ಯಾನ್ಸ್ ಕೂಡ ಈ ಬಾರಿ ಮುಂಬೈ ಟ್ರೋಫಿ ಗೆಲ್ಲಲಿ ಎಂದು ಆಶಿಸಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ,(ಏಜೆನ್ಸೀಸ್).
40 ಲಕ್ಷ ರೂ. ಜಮೀನು, 100 ಗ್ರಾಂ ಚಿನ್ನ! ಷರತ್ತಿಗೆ ಒಪ್ಪಿದ್ದರೂ ಹೀಗೇಕೆ ಆಯಿತು? ವಧು ಕಂಗಾಲು | Marriage