blank

ಗುರುಕುಲ ಪರಂಪರೆ ಮರು ಸ್ವಾಪಿಸುವ ಅಗತ್ಯವಿದೆ

blank

ಹುಣಸೂರು: ಈ ನೆಲದ ಸಂಸ್ಕೃತಿ, ಇತಿಹಾಸ ಮತ್ತು ಸಾಮಾಜಿಕ ಬಾಂಧವ್ಯ ಉಳಿಸಿ ಬೆಳೆಸಲು ಮಠಮಾನ್ಯಗಳು ಗುರುಕುಲ ಪರಂಪರೆಯನ್ನು ಮರುಸ್ಥಾಪಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

blank

ತಾಲೂಕಿನ ಗಾವಡಗೆರೆಯ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಅವರ 50ನೇ ವರ್ಷದ ಚರ ಪಟ್ಟಾಧಿಕಾರದ ಸುವರ್ಣ ಮಹೋತ್ಸವ ಕಾರ್ಯಕ್ರಮದ ಎರಡನೇ ದಿನದ ಧಾರ್ಮಿಕ ಸಭೆ ಮತ್ತು ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ದೇಶ ಇಂದು ತನ್ನ ಆರ್ಥಿಕ ಸ್ಥಿತಿಯಲ್ಲಿ ವಿಶ್ವದ 5ನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೇರುವತ್ತ ಮುನ್ನುಗ್ಗುತ್ತಿದೆ. ಆಧುನಿಕ ತಂತ್ರಜ್ಞಾನದ ಸದ್ಬಳಕೆಯ ಮೂಲಕ ಚಂದ್ರಗ್ರಹಕ್ಕೂ ಕಾಲಿಡಲು ಸಿದ್ಧರಾಗುತ್ತಿದ್ದೇವೆ. ಅಂತೆಯೇ ತಂತ್ರಜ್ಞಾನಗಳ ದುರ್ಬಳಕೆಯಿಂದ ಸಂಕಷ್ಟ, ಆತ್ಮಹತ್ಯೆಯಂತಹ ಪ್ರಕರಣಗಳನ್ನು ಕಾಣುತ್ತಿದ್ದೇವೆ. ಆಧುನಿಕ ಜೀವನಶೈಲಿಯ ನಡುವೆ ಕುಟುಂಬದ ಸದಸ್ಯರೊಂದಿಗೆ ಮತ್ತು ಸಮಾಜದ ನಡುವೆ ಈ ಹಿಂದೆ ನಮ್ಮ ಪೂರ್ವಜರು ಕಂಡುಕೊಂಡಿದ್ದ ಬಾಂಧವ್ಯ, ಬೆಸುಗೆಗಳನ್ನು ಮರೆಯುತ್ತಿದ್ದೇವೆ ಎಂದು ಬೇಸರಿಸಿದರು.

ಸರಳ ಮತ್ತು ಸಹೃದಯ ಸ್ವಾಮೀಜಿ: ಗಾವಡಗೆರೆ ಶ್ರೀ ಮಠದ ಶ್ರೀ ನಟರಾಜ ಸ್ವಾಮೀಜಿ ಅವರು ಸರಳ ಮತ್ತು ಸಹೃದಯ ಮನಸ್ಸು ಉಳ್ಳವರು. 50 ವರ್ಷಗಳ ಹಿಂದೆ ನೆಲೆಯೂರಿ ಈ ಭಾಗದ ಮತ್ತು ಅಂತರ ಜಿಲ್ಲೆ ವ್ಯಾಪ್ತಿಯಲ್ಲೂ ಸಮಾಜ ಸೇವೆಯೊಂದಿಗೆ ಲಕ್ಷಾಂತರ ಅನಾಥ ಮಕ್ಕಳಿಗೆ ತ್ರಿವಿಧ ದಾಸೋಹದ ಸೇವೆ ನೀಡುವ ಮೂಲಕ ಮಾತೃಹೃದಯದೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿರುವುದು ನಮ್ಮೆಲ್ಲರ ಪುಣ್ಯವೆಂದು ಕೊಂಡಾಡಿದರು.

ಶಿರಹಟ್ಟಿಯ ಭಾವೈಕ್ಯ ಪೀಠ ಸಂಸ್ಥಾನ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಮಠದ ಸ್ವಾಮಿ ಜ್ಞಾನಿಯಾಗಿರಬೇಕು, ಮಠದ ಭಕ್ತರು ನಿಸ್ವಾರ್ಥಿಯಾಗಿದ್ದಲ್ಲಿ ಮಾತ್ರ ಮಠ ಅಭಿವೃದ್ಧಿ ಹೊಂದಿ ಭಕ್ತರ ಸರ್ವತೋಮುಖ ಬೆಳವಣಿಗೆ ಸಾಧ್ಯ. ಸ್ವಾಮೀಜಿಗಳಲ್ಲಿ ಎರಡು ವಿಧವಿದೆ. ಒಬ್ಬರು ಮೆರವಣಿಗೆ ಸ್ವಾಮೀಜಿ(ಎಂಎಸ್) ಆಗಿದ್ದರೆ, ಕೇವಲ ಕೆಲಸವೇ ತನ್ನ ಜೀವನ ಎಂದು ದುಡಿಯುವ ಸ್ವಾಮಿಗಳು(ಕೆಎಸ್) ಮತ್ತೊಂದು ವಿಧದವರಾಗಿದ್ದಾರೆ. ಶ್ರೀ ಮಠದ ನಟರಾಜ ಸ್ವಾಮಿಗಳು ಎರಡನೇ ವಿಧಕ್ಕೆ ಸೇರಿದವರು ಎಂದರು.

ಶ್ರೀರಂಗಪಟ್ಟಣದ ಬೇಬಿ ಮಠ ಮತ್ತು ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಈ ಭಾಗದ ಸಂಸ್ಕೃತಿ ಮತ್ತು ಸಂಸ್ಕಾರ ಎರಡನ್ನೂ ಜೋಪಾನ ಮಾಡಿದವರು ಶ್ರೀ ನಟರಾಜ ಸ್ವಾಮೀಜಿ. ನೀವು ಮಠಕ್ಕೆ ಏನು ಕೊಡುತ್ತೀರೋ ಇಲ್ಲವೋ ಗೊತ್ತಿಲ್ಲ, ಆದರೆ ಸ್ವಾಮಿಗಳಿಗೆ ಪ್ರೀತಿ ಮತ್ತು ಭಕ್ತಿಯನ್ನು ಮಾತ್ರ ನೀಡಲು ಮರೆಯದಿರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳದ ಸಂಭ್ರಮ ಮೇಳೈಸಿದ್ದರೆ ಹುಣಸೂರಿನ ಈ ಪುಣ್ಯಭೂಮಿಯಲ್ಲಿ ಸಾಧುಸಂತರು ಮೇಳೈಸುವ ಮೂಲಕ ನಮ್ಮೆಲ್ಲರಿಗೂ ಪುಣ್ಯ ಕರುಣಿಸುತ್ತಿದ್ದಾರೆ. ಶ್ರೀ ನಟರಾಜ ಶ್ರೀಗಳು 50 ವರ್ಷಗಳಿಂದ ಅನಾಥ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣ ನೂರಾರು ಕುಟುಂಬಗಳ ಬದುಕಿಗೆ ಆಸರೆಯಾಗಿದೆ ಎಂದು ಸ್ಮರಿಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಾಲೂರು ಮಠದ ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಪಡಗೂರು ಅಡವಿ ಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಂತರು ಪಾಲ್ಗೊಂಡಿದ್ದರು.

 

 

 

 

 

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…