ಸಂಗಮನಾಥನ ಸನ್ನಿಧಿಗೆ ನಾಲ್ಕು ಮೆಟ್ಟಿಲು ಬಾಕಿ

There are four steps to the presence of Sangamnath

ಕೂಡಲಸಂಗಮ: ಆಲಮಟ್ಟಿ ಜಲಾಶಯದಿಂದ ಗುರುವಾರ ಸಂಜೆ 3 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಬಿಟ್ಟ ಪರಿಣಾಮ ಶುಕ್ರವಾರ ನಾರಾಯಣಪುರ ಜಲಾಶಯದ ಹಿನ್ನೀರು ಅಧಿಕಗೊಂಡು ಕೃಷ್ಣಾ, ಮಲಪ್ರಭಾ ಸಂಗಮವಾದ ಕೂಡಲಸಂಗಮದ ಸಂಗಮೇಶ್ವರ ದೇವಾಲಯಕ್ಕೆ ನೀರು ನುಗ್ಗಲು ನಾಲ್ಕು ಮೆಟ್ಟಿಲು ಮಾತ್ರ ಬಾಕಿ ಇದೆ.

ಕೃಷ್ಣಾ ನದಿ ದಡದ ಕೂಡಲಸಂಗಮ, ವಳಕಲದಿನ್ನಿ, ಬಿಸಲದಿನ್ನಿ, ಚವಡಕಮಲದಿನ್ನಿ, ತುರಡಗಿ, ಕಟಗೂರ ಗ್ರಾಮದ ರೈತರ ಜಮೀನಿಗೆ ನೀರು ನುಗ್ಗಿ ಸೂರ್ಯಕಾಂತಿ, ಕಬ್ಬು ಮುಂತಾದ ಬೆಳೆಗಳು ಜಲಾವೃತವಾಗಿವೆ. ಕೃಷ್ಣಾ ನದಿ ರಭಸದಿಂದ ಹರಿಯುತ್ತಿದ್ದು, ನದಿ ದಡಕ್ಕೆ ಜಾನುವಾರು, ಸಾರ್ವಜನಿಕರು ಹೋಗದಂತೆ ಗ್ರಾಮದಲ್ಲಿ ಡಂಗುರ ಸಾರಲಾಗಿದೆ.

ಗುರುವಾರ ರಾತ್ರಿ ಏಕಾಏಕಿ ನೀರು ಬಂದ ಪರಿಣಾಮ ಕೃಷ್ಣಾ ನದಿ ದಡದಲ್ಲಿ ರೈತರು ಅಳವಡಿಸಿದ್ದ ಪಂಪ್‌ಸೆಟ್‌ಗಳು ಮುಳುಗಿದ್ದವು. ಶುಕ್ರವಾರ ಪಂಪ್‌ಸೆಟ್‌ಗಳನ್ನು ತೆಪ್ಪದ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ದೃಶ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಕಂಡು ಬಂತು. ದಿನದಿಂದ ದಿನಕ್ಕೆ ನದಿಯಲ್ಲಿ ನೀರು ಏರಿಕೆಯಾಗುತ್ತಿರುವುದರಿಂದ ರೈತರು, ಗ್ರಾಮದ ಜನರಿಗೆ ಆತಂಕ ಮೂಡಿದೆ.

Share This Article

ಪ್ರತಿದಿನ ಶುಂಠಿ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಶುಂಠಿಯು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಸಾಲೆಯಾಗಿದೆ. ಇದನ್ನು ಪ್ರಪಂಚದಾದ್ಯಂತ ಅಡುಗೆ ಮತ್ತು ಗಿಡಮೂಲಿಕೆಗಳ ಪರಿಹಾರಗಳಲ್ಲಿ ಬಳಸಲಾಗುತ್ತದೆ.…

ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ ಮೆದುಳಿಗೂ ಮುಖ್ಯ; ಹೇಗೆ.. ಇಲ್ಲಿದೆ ಮಾಹಿತಿ | Health Tips

ವಯಸ್ಸು ಹೆಚ್ಚಾದಂತೆ ಸ್ಮರಣಶಕ್ತಿ ದುರ್ಬಲಗೊಳ್ಳುತ್ತದೆ. ಆದರೆ ಇಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಅಥವಾ…

ಭಾರತದ ಈ 7 ನಗರಗಳಲ್ಲಿ ಮಾಂಸದೂಟ ಸಂಪೂರ್ಣ ನಿಷೇಧ! ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅವಕಾಶ | No Meat City

No Meat Cities: ಭಾರತ ಒಂದು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಪಾಕಪದ್ಧತಿಗಳ ದೇಶ. ಇಲ್ಲಿನ ಸಂಸ್ಕೃತಿ,…