More

    ಅಂತರ್‌ಜಿಲ್ಲಾ ಕಳವು ಆರೋಪಿಗಳಿಬ್ಬರ ಬಂಧನ

    ಹರಪನಹಳ್ಳಿ: ಅಂತರ್ಜಿಲ್ಲಾ ಕಳವು ಆರೋಪಿಗಳಿಬ್ಬರನ್ನು ಬಂಸಿರುವ ಹರಪನಹಳ್ಳಿ ಪೊಲೀಸರು, ಅವರಿಂದ ಟಾಟಾ ಸುಮೋ ಸಮೇತ ಏಳು ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಮರಿಯಮ್ಮನಹಳ್ಳಿಯ ಸತೀಶ್‌ಗೌಡ, ಬಳ್ಳಾರಿಯ ಲೋಕೇಶ್ ಆರೋಪಿಗಳು. ಇವರೊಂದಿಗೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಳ್ಳಾರಿ ನಿವಾಸಿ ರಾಕೇಶ್ ತಲೆಮರೆಸಿಕೊಂಡಿದ್ದಾನೆ.

    ಆರೋಪಿಗಳು ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕಿ ಚಿನ್ನ, ಬೆಳ್ಳಿ ಆಭರಣ, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳವು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

    ಮಂಗಳವಾರ ಕೊಟ್ಟೂರು ಕಡೆಯಿಂದ ಹರಪನಹಳ್ಳಿಗೆ ಬಂದಿದ್ದ ಇವರ ಚಲನವಲನಗಳನ್ನು ಗಮನಿಸಿದ ಸಾರ್ವಜನಿಕರು ಅನುಮಾನದ ಮೇಲೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅವರು ಹರಪನಹಳ್ಳಿ, ಆಂಧ್ರದ ಅನಂತಪುರ ಜಿಲ್ಲೆಯ ವಿಡುಪನಕಲ್, ಚಿತ್ರದುರ್ಗ ಗ್ರಾಮಾಂತರ, ಹರಹರ, ದಾವಣಗೆರೆ, ಹೂವಿನಹಡಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂಟು ಕಡೆ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.

    ದಾವಣಗೆರೆ ಎಸ್‌ಪಿ ಹನುಮಂತರಾಯ, ಹೆಚ್ಚುವರಿ ಎಸ್‌ಪಿ ರಾಜೀವ್ ನಿರ್ದೇಶನದಂತೆ ಹರಪನಹಳ್ಳಿ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಕೆ. ಕುಮಾರ, ಪಿಎಸ್‌ಐ ಶ್ರೀಧರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts