
ಲೋಕಾಪುರ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಹಾಗೂ ಪೋಷಕರ ಪಾತ್ರ ಮಹತ್ತರವಾಗಿದೆ ಎಂದು ರಾಜ್ಯ ಸಹಕಾರ ಕುರಿ ಮಹಾಮಂಡಳ ಉಪಾಧ್ಯಕ್ಷ ಕಾಶಿನಾಥ ಹುಡೇದ ಹೇಳಿದರು.
ಪಟ್ಟಣದ ರಾಮಕೃಷ್ಣ ಪರಮಹಂಸ ಶಿಕ್ಷಣ ಸಂಸ್ಥೆಯ ಸಿರಿಗನ್ನಡ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಶಾರದಾ ಮಾತಾ ಆಂಗ್ಲ ಮಾಧ್ಯಮ ಶಾಲೆ, ಸ್ವಾಮಿ ವಿವೇಕಾನಂದ ನವೋದಯ ತರಬೇತಿ ಕೇಂದ್ರ ಸಹಯೋಗದಲ್ಲಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಿವೇಕೋತ್ಸವ-2025ರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅರಳಲು ವಾರ್ಷಿಕ ಸ್ನೇಹ ಸಮ್ಮೇಳನ ಸೂಕ್ತ ವೇದಿಕೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿವೇಕಾನಂದ ಎಂ. ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದ ಜತೆಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಲು ಸಾಧ್ಯವೆಂದು ಹೇಳಿದರು.
ಪತ್ರಕರ್ತ ಶ್ರೀಶೈಲ ಬಿರಾದಾರ ಮಾತನಾಡಿದರು.
ವಿವೇಕ ಚೇತನ ಪ್ರಶಸ್ತಿ ಪುರಸ್ಕಾರ: ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಬಿ.ಎಚ್. ಗೋನಾಳ ದಂಪತಿಗಳಿಗೆ ವಿವೇಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಧಕರಿಗೆ ಸನ್ಮಾನ: ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಸಲೀಮ ಕೊಪ್ಪದ, ಕರ್ನಾಟಕ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಪಾರಿಜಾತ ಕಲಾವಿದ ನಾರಾಯಣ ಪತ್ತಾರ, ಕರ್ನಾಟಕ ಬಯಲಾಟ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತ ಗ್ಯಾನಪ್ಪ ಮಾದರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರತ್ನಾ ಕಾಳಮ್ಮನವರ ಹಾಗೂ ದುರಗವ್ವ ರೊಡ್ಡಪ್ಪನವರ, ಪ್ರಭು ಬೋಳಿಶೆಟ್ಟಿ ಹಾಗೂ ಬಸವರಾಜ ಕುಂದರಗಿ ಅವರನ್ನು ಗೌರವಿಸಲಾಯಿತು.
ಶಿಕ್ಷಕ ರವಿಕುಮಾರ ಸನದಿ ಶಾಲಾ ವರದಿ ವಾಚನ ಮಾಡಿದರು.
ಜಗದೀಶ ಗಾಣಿಗೇರ, ಸಂತೋಷ ದೇಶಪಾಂಡೆ, ಕಸಾಪ ಗೌರವ ಕಾರ್ಯದರ್ಶಿ ಪ್ರವೀಣ ಗಂಗಣ್ಣವರ, ಚಿದಂಬರೇಶ್ವರ ಬ್ಯಾಂಕ್ ಅಧ್ಯಕ್ಷ ಸಂತೋಷ ದೇಶಪಾಂಡೆ, ರಾಮಕೃಷ್ಣ ಪರಮಹಂಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ದು ಹೊಳಬಸಪ್ಪ ಹೂಗಾರ, ಸಂಸ್ಥೆ ಉಪಾಧ್ಯಕ್ಷ ಹೊಳಬಸಪ್ಪ ಹೂಗಾರ, ಶಕುಂತಲಾ ಹೆಬ್ಬಳ್ಳಿಮಠ, ಶಿವಪ್ಪ ಹೂಗಾರ, ಶಿಕ್ಷಕವಂದ, ಪಾಲಕರು, ಮಕ್ಕಳು ಇದ್ದರು.
ಶಾಲೆ ಕೋ ಆರ್ಡಿನೇಟರ್ ಮಂಜುಳಾ ದಂಡಗಿ ಸ್ವಾಗತಿಸಿದರು. ಕೃಷ್ಣಾ ದಳವಾಯಿ ಮತ್ತು ಪ್ರವಿತ್ರಾ ಮುತ್ತನ್ನವರ ನಿರೂಪಿಸಿದರು. ಕೆ.ಪಿ. ಯಾದವಾಡ ವಂದಿಸಿದರು.