ಅಲೆದಾಡುತ್ತಿದ್ದ ವಿದೇಶಿಗನನ್ನು ಜರ್ಮನಿಗೆ ಕಳುಹಿಸಿದ ಪೊಲೀಸರು

ಬೆಂಗಳೂರು: ಕಳೆದ ಒಂದೂವರೆ ವರ್ಷಗಳ ಹಿಂದೆ ಪ್ರವಾಸಿ ವೀಸಾದಡಿ ಬಂದಿದ್ದ ಜರ್ಮನಿ ಪ್ರಜೆಯೊಬ್ಬ ಮಾನಸಿಕ ಸಮಸ್ಯೆಯಿಂದ ಬಳಲಿ ನಗರದೆಲ್ಲೆಡೆ ಅಲೆದಾಡುತ್ತಿರುವುದನ್ನು ಗಮನಿಸಿದ ಸಂಪಂಗಿರಾಮನಗರ ಪೊಲೀಸರು ಆತನನ್ನು ಸ್ವದೇಶಕ್ಕೆ ಮರಳಿಸಿ ಮಾನವೀಯತೆ ಮೆರೆದಿದ್ದಾರೆ. ಜರ್ಮನಿ ಮೂಲದ ಅನಪೆಟ್​ ಯಾಡರಿಗೋ (47) ಕಳೆದ 2019 ನವೆಂಬರ್‌ನಿಂದ 2020 ನವೆಂಬರ್ ಅವಧಿವರೆಗೆ ಪ್ರವಾಸಿ ವೀಸಾ ಪಡೆದು ನಗರಕ್ಕೆ ಬಂದಿದ್ದ. ವೀಸಾ ಅವಧಿ ಮುಕ್ತಾಯಗೊಳ್ಳುವವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಸುತ್ತಾಡುತ್ತಿದ್ದ. ಮಾದಕ ವ್ಯಸನಿಯಾಗಿರುವ ಆತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ. ಆರಂಭದಲ್ಲಿ ಐಶಾರಾಮಿ ಹೋಟೆಲ್‌ಗಳಲ್ಲಿ … Continue reading ಅಲೆದಾಡುತ್ತಿದ್ದ ವಿದೇಶಿಗನನ್ನು ಜರ್ಮನಿಗೆ ಕಳುಹಿಸಿದ ಪೊಲೀಸರು