ಚಾಮರಾಜನಗರ: ಮಹಿಳೆಯೊಬ್ಬರು ಮೃತಪಟ್ಟು ಮೂರು ದಿನ ಕಳೆದರೂ ಇನ್ನು ಶವ ಸಂಸ್ಕಾರ ನಡೆದಿಲ್ಲ.
ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿ ಗ್ರಾಮದಲ್ಲಿ ಹಲ್ಲೆಯಿಂದ ಮೃತಪಟ್ಟ ಶಶಿಕಲಾ ಎಂಬುವವರ ಶವವನ್ನು ಪತಿ ಮನೆ ಮುಂದೆ ಇಟ್ಟು ಮಕ್ಕಳಿಗೆ ಆಸ್ತಿ ಬರೆದುಕೊಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿ ಸುರೇಶ್ ಕುಟುಂಬದವರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಶವ ಸಂಸ್ಕಾರ ವಿಳಂಬವಾಗಿದೆ.
ಸುರೇಶ್ ತನ್ನ ಪತ್ನಿ ಶಶಿಕಲಾಳನ್ನು ಹಲ್ಲೆ ಮಾಡಿದ್ದ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಆಕೆ ಮೃತಪಟ್ಟಿದ್ದರು. ಶಶಿಕಲಾ ಅವರ ಪಾಲಕರು ಗಂಡು ಮಗುವಿಗೆ ಸುರೇಶನ ಆಸ್ತಿ ಬರೆದುಕೊಡಬೇಕು. ಅಲ್ಲಿವರೆಗೆ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕೊಲೆ ಆರೋಪದ ಮೇಲೆ ಪೊಲೀಸರು ಸುರೇಶ್ನನ್ನು ಬಂಧಿಸಿದ್ದಾರೆ. ಆದರೆ ಸುರೇಶ್ ಕುಟುಂಬದವರು ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ. (ದಿಗ್ವಿಜಯ ನ್ಯೂಸ್)