ಜನರನ್ನು ಮಂತ್ರಮುಗ್ಧರನ್ನಾಗಿಸಿದ ಕೊಳಲು ವಾದನ

blank

ಅರಕಲಗೂಡು: ತಾಲೂಕಿನ ಸಂಗೀತ ಗ್ರಾಮ ರುದ್ರಪಟ್ಟಣದಲ್ಲಿ ಶನಿವಾರ ರಾತ್ರಿ ವಿದ್ವಾನ್ ಅಮಿತ್ ನಾಡಿಗ್ ತಂಡದ ಸದಸ್ಯರು ಪ್ರಸ್ತುತಪಡಿಸಿದ ಕೊಳಲು ವಾದನ ಕಛೇರಿ ಜನರನ್ನು ಮಂತ್ರಮುಗ್ಧರನ್ನಾಗಿಸಿತು.

ಗ್ರಾಮದ ರಾಮ ಮಂದಿರದ ವರ್ಣರಂಜಿತ ಮಂಟಪದಲ್ಲಿ ದೀಪಾವಳಿ ಹಬ್ಬದ ಸಂಜೆ ಆಯೋಜಿಸಿದ್ದ ಕೊಳಲು ವಾದನದ ನೀನಾದ ಸಂಗೀತಾಸ್ತಕರ ಮನಸ್ಸಿಗೆ ಮುದ ನೀಡಿತು. ಆರಂಭದಲ್ಲಿ ವಿದ್ವಾನ್ ಅಮಿತ್ ನಾಡಿಗ್ ಅವರು ಪುರಂದರ ದಾಸರ ಕೃತಿಯೊಂದಿಗೆ ಸೌರಾಷ್ಟ್ರ, ಪೂರ್ವಿಕ ಕಲ್ಯಾಣಿ, ರಂಜಿನಿ ರಾಗದಲ್ಲಿ ಶ್ರೀ ತ್ಯಾಗರಾಜರ ಕೃತಿಗಳನ್ನು ಒಂದೂಕಾಲು ತಾಸು ನಿರಂತರವಾಗಿ ನುಡಿಸಿ ಜನಮನ ಸೂರೆಗೊಂಡರು.

ಕೊಳಲು ವಾದನಕ್ಕೆ ತಕ್ಕಂತೆ ನಾದಮಯವಾಗಿ ಹೊರಹೊಮ್ಮಿದ ವಿದ್ವಾನ್ ಬಿ.ಸಿ. ಮಂಜುನಾಥ್ ಅವರ ಮೃದಂಗದ ಮೋಡಿಗೆ ಬೆರಗಾದ ಜನರು ತಲೆದೂಗಿದರು. ವಿದ್ವಾನ್ ಸೋಮಶೇಖರ್ ಅವರು ಕೊನ್ನಕ್ಕೋಲ್ ನುಡಿಸಿ ಸಂಗೀತಾಸಕ್ತರನ್ನು ನಾದಲೋಕದಲ್ಲಿ ತೇಲಿಸಿದರು. ಪುಟ್ಟ ಬಾಲಕ ಸ್ಕಂದ ಘಟ ನುಡಿಸಿ ಕೊಳಲು ವಾದನಕ್ಕೆ ಸಾಥ್ ನೀಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು.

Share This Article

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…