More

    ಭಾರತದ ಸವಾಲು ಅಂತ್ಯ

    ಬ್ಯಾಂಕಾಕ್: ಪ್ರತಿಷ್ಠಿತ ಥಾಯ್ಲೆಂಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ದಿನವೇ ಭಾರತದ ಸಂಪೂರ್ಣ ಸವಾಲು ಅಂತ್ಯಗೊಂಡಿದೆ. ಸೈನಾ ನೆಹ್ವಾಲ್​ರೊಂದಿಗೆ, ಕೆ.ಶ್ರಿಕಾಂತ್, ಎಚ್ ಎಸ್ ಪ್ರಣಯ್, ಸವೀಮ್ ವರ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿದ್ದರಿಂದ ಭಾರತದ ಹೋರಾಟ ಮುಕ್ತಾಯಕಂಡಿದೆ. ಬುಧವಾರ ನಡೆದ ಪಂದ್ಯದಲ್ಲಿ 5ನೇ ಶ್ರೇಯಾಂಕದ ಸೈನಾ ನೆಹ್ವಾಲ್ 13-21, 21-17, 15-21 ರಿಂದ ಡೆನ್ಮಾರ್ಕ್​ನ ಶ್ರೇಯಾಂಕರಹಿತ ಆಟಗಾರ್ತಿ ಲೈನ್ ಜರೆಸ್​ಫೆಲ್ಡ್​ಗೆ 47 ನಿಮಿಷದ ಹೋರಾಟದಲ್ಲಿ ಶರಣಾದರು. ಪುರುಷರ ಸಿಂಗಲ್ಸ್​ನಲ್ಲಿ ಎಚ್​ಎಸ್ ಪ್ರಣಯ್ 17-21, 22-20, 19-21 ರಿಂದ ಮಲೇಷ್ಯಾದ ಲೀವ್ ಡರೇನ್​ಗೆ ಶರಣಾದರು.

    ಶ್ರೀಕಾಂತ್​ಗೆ ಮತ್ತೊಮ್ಮೆ ನಿರಾಸೆ: ಹಾಲಿ ಋತುವಿನಲ್ಲಿ ಕೆ.ಶ್ರೀಕಾಂತ್​ರ ಸತತ ಮೂರನೇ ಟೂರ್ನಿಯಲ್ಲಿ ಮೊದಲ ಸುತ್ತಿನ ಸೋಲು ಎದುರಿಸಿದರು. ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 300 ಟೂರ್ನಿಯಲ್ಲಿ ಸಮೀರ್ ವರ್ಮ 16-21, 15-21 ರಿಂದ ಮಲೇಷ್ಯಾದ ಲೀ ಝಿ ಜಿಯಾರನ್ನು 39 ನಿಮಿಷಗಳ ಹೋರಾಟದಲ್ಲಿ ಶರಣಾದರೆ, 5ನೇ ಶ್ರೇಯಾಂಕದ ಶ್ರೀಕಾಂತ್, ಇಂಡೋನೇಷ್ಯಾದ ಶೆಸರ್ ಹಿರೆನ್ ರುಸ್ತಾವಿಟೋ ವಿರುದ್ಧ 21-12, 14-21, 12-21 ರಿಂದ 48 ನಿಮಿಷಗಳ ಹೋರಾಟದಲ್ಲಿ ಶರಣಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts