ಸಂಪಾದಕೀಯ | ನಕ್ಸಲ್ ನಿಗ್ರಹದ ಸವಾಲು

blank

ಛತ್ತೀಸ್​ಗಢದಲ್ಲಿ ನಕ್ಸಲರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಸೋಮವಾರ ಬಸ್ತಾರ್ ವಲಯದ ಕುಟ್ರು ಎಂಬಲ್ಲಿ ಭದ್ರತಾ ಪಡೆಯ ವಾಹನವನ್ನು ಸುಧಾರಿತ ಸ್ಪೋಟಕ ಸಾಧನ (ಐಇಡಿ) ಬಳಸಿ ಸ್ಪೋಟಿಸಿದ ಪರಿಣಾಮ ಕಾರಿನ ಚಾಲಕ ಸೇರಿ 9 ಯೋಧರು ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಗಳು ಕಳೆದ ವರ್ಷ (2024) ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದವು. ಈ ಹಿನ್ನೆಲೆಯಲ್ಲಿ 250ಕ್ಕೂ ಹೆಚ್ಚು ನಕ್ಸಲರು ಎನ್​ಕೌಂಟರ್​ಗಳಲ್ಲಿ ಹತರಾದರು. ಪರಿಣಾಮ, ಈ ಪ್ರದೇಶದಲ್ಲಿ ನಕ್ಸಲ್ ಪ್ರಾಬಲ್ಯ ಒಂದಿಷ್ಟು ಕುಗ್ಗಿತು. ಆದರೆ ಈಗ ನಕ್ಸಲರು ಐಇಡಿ ದಾಳಿ ನಡೆಸಿ, ವಿಧ್ವಂಸಕ ಕೃತ್ಯ ನಡೆಸಿದ್ದಾರೆ. ಇದು ಕಳೆದ ಎರಡು ವರ್ಷಗಳಲ್ಲಿ ಭದ್ರತಾ ಪಡೆ ಗುರಿಯಾಗಿಸಿಕೊಂಡು ನಡೆದ ಅತಿದೊಡ್ಡ ದಾಳಿಯಾಗಿದೆ.

blank

ಛತ್ತೀಸ್​ಗಢ ಮಾತ್ರವಲ್ಲ ದೇಶದ ಹಲವು ರಾಜ್ಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ತೀವ್ರಗೊಂಡಿದ್ದು, ನಕ್ಸಲ್ ಸಂಘಟನೆಗಳ ಹಲವು ಪ್ರಮುಖ ನಾಯಕರು ಹತರಾಗಿದ್ದಾರೆ. ಅಲ್ಲದೆ, ಹಿಂಸೆಯನ್ನು ತ್ಯಜಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಕರೆಗೆ ಸ್ಪಂದಿಸಿ ಕೆಲ ನಕ್ಸಲರು ಶರಣಾಗಿ, ಸಮಾಜದ ಮುಖ್ಯವಾಹಿನಿಗೆ ಮರಳಿದ್ದಾರೆ. ಆದರೆ, ಈ ಬಗೆಯ ದುಷ್ಕೃತ್ಯಗಳನ್ನು ನೋಡಿದರೆ ನಕ್ಸಲರ ಮನೋಬಲ ಇನ್ನೂ ಕುಗ್ಗಿಲ್ಲ ಎಂಬುದು ಸ್ಪಷ್ಟ ಹಾಗೂ ಸಮಾಜದಲ್ಲಿ ಹಿಂಸೆಯನ್ನು ಮುಂದುವರಿಸುವ ಅವರ ಇರಾದೆ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗುತ್ತಿದೆ.

ಸಮಾಜ ಬದಲಾವಣೆಯಾಗಬೇಕಾದರೆ, ಅಭಿವೃದ್ಧಿಯಾಗಬೇಕಾದರೆ ಮೊದಲು ಶಾಂತಿ ನೆಲೆಸಬೇಕು. ವೈಚಾರಿಕವಾಗಿಯೂ ದಾರಿ ತಪ್ಪಿರುವ ಕೆಂಪು ಉಗ್ರರು, ಹಿಂಸೆಯ ಹಿಂದೆ ಬಿದ್ದಿರುವುದು, ಈ ಜಾಲದಲ್ಲಿ ಅಮಾಯಕ ಯುವಕರನ್ನು ಸೇರಿಸುತ್ತಿರುವುದು ಕಳವಳಕಾರಿ ಬೆಳವಣಿಗೆ. ಇವರಿಗೆ ಆರ್ಥಿಕ ಸಂಪನ್ಮೂಲ ಮತ್ತು ಇತರ ಆಶ್ರಯ ಒದಗಿಸುತ್ತಿರುವವರ ವಿರುದ್ಧವೂ ದೇಶದ್ರೋಹ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಬೇಕು. ನಕ್ಸಲ್​ವಾದ ದೇಶದ ಆಂತರಿಕ ಭದ್ರತೆಗೆ ಬಹುದೊಡ್ಡ ಶತ್ರು. ಹಾಗಾಗಿ, ಈ ಪಿಡುಗನ್ನು ಬೇರುಸಮೇತ ಕಿತ್ತೊಗೆಯಬೇಕಿದೆ. ಹಾಗಾಗಿ, ಈ ವಿಷಯದಲ್ಲಿ ಸಂಘಟಿತ ಹೋರಾಟ ಅತ್ಯಗತ್ಯವಾಗಿದೆ. ನಕ್ಸಲ್ ದಾಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ‘2026ರ ಮಾರ್ಚ್ ವೇಳೆಗೆ ದೇಶದಲ್ಲಿ ನಕ್ಸಲ್​ವಾದದ ಅಂತ್ಯವಾಗಲಿದೆ’ ಎಂದು ಘೋಷಿಸಿದ್ದಾರೆ.

ಶಾಂತಿ ಸ್ಥಾಪನೆಗೆ ಮತ್ತು ಬುಡಕಟ್ಟು ಜನಸಂಖ್ಯೆ ಹೆಚ್ಚಿರುವ ರಾಜ್ಯಗಳು ನಿಜವಾದ ಅಭಿವೃದ್ಧಿಯ ಕಡೆ ಹೊರಳಬೇಕಾದರೆ ನಕ್ಸಲರ ಹಾವಳಿ ಕೊನೆಗೊಳ್ಳಲೇಬೇಕು. ಈ ನಿಟ್ಟಿನಲ್ಲಿ ರಾಜ್ಯಗಳೂ ಕೇಂದ್ರಕ್ಕೆ ಸಹಕಾರ ನೀಡಬೇಕಿದೆ. ದೇಶವು ನಕ್ಸಲ್​ಮುಕ್ತಗೊಂಡರೆ ನಿಜಕ್ಕೂ ಆಂತರಿಕ ಭದ್ರತೆಯ ವಿಷಯದಲ್ಲಿ ಮಹತ್ವದ ಮೈಲಿಗಲ್ಲು ಮತ್ತು ನಕ್ಸಲರ ದಾಳಿಯಲ್ಲಿ ಈವರೆಗೆ ಹುತಾತ್ಮರಾದ ನೂರಾರು ಯೋಧರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಛತ್ತೀಸ್​ಗಢ ದುರಂತದಿಂದ ಪಾಠ ಕಲಿತು, ನಕ್ಸಲ್ ನಿಗ್ರಹ ಕಾರ್ಯಾಚರಣೆ ಇನ್ನಷ್ಟು ಚುರುಕುಗೊಳ್ಳಲಿ. ಉಳಿದ ರಾಜ್ಯಗಳು ಕೂಡ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಲು ಇದು ಸಕಾಲ.

ಈ 9 ಆಹಾರಗಳನ್ನು ತಿಂದರೆ HMPV ವೈರಸ್​ನಿಂದ ದೂರ ಉಳಿಯಬಹುದು! ಇಲ್ಲಿದೆ ಉಪಯುಕ್ತ ಮಾಹಿತಿ…

Share This Article

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…