ರಾಷ್ಟ್ರೀಯ ಈಜು: ಕರ್ನಾಟಕ ಸಮಗ್ರ ಚಾಂಪಿಯನ್​, ಮುಂದುವರಿದ 3 ದಶಕಗಳ ಪ್ರಾಬಲ್ಯ

blank

ಬೆಂಗಳೂರು: ಕರ್ನಾಟಕ ತಂಡ 78ನೇ ಸೀನಿಯರ್​ ರಾಷ್ಟ್ರೀಯ ಈಜು ಚಾಂಪಿಯನ್​ಷಿಪ್​ನಲ್ಲಿ ಸಮಗ್ರ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಈ ಮೂಲಕ ಕೂಟದಲ್ಲಿ 3 ದಶಕಗಳ ಪ್ರಾಬಲ್ಯವನ್ನು ಮುಂದುವರಿಸಿದೆ. ಒಡಿಶಾದ ಭುವನೇಶ್ವರದಲ್ಲಿ ಗುರುವಾರ ಮುಕ್ತಾಯಗೊಂಡ ಕೂಟದಲ್ಲಿ ಕರ್ನಾಟಕದ ಈಜುಪಟುಗಳು 16 ಚಿನ್ನ, 11 ಬೆಳ್ಳಿ ಮತ್ತು 14 ಕಂಚಿನ ಸಹಿತ ಒಟ್ಟು 41 ಪದಕಗಳನ್ನು ಗೆದ್ದು ಅಗ್ರಸ್ಥಾನ ಅಲಂಕರಿಸಿದರು. ತಮಿಳುನಾಡು (8 ಚಿನ್ನ, 5 ಬೆಳ್ಳಿ, 3 ಕಂಚು) ದ್ವೀತಿಯ ಮತ್ತು ಮಹಾರಾಷ್ಟ್ರ (5 ಚಿನ್ನ, 6 ಬೆಳ್ಳಿ, 6 ಕಂಚು) ತೃತೀಯ ಸ್ಥಾನ ಗಳಿಸಿತು.

ಕರ್ನಾಟಕ ತಂಡ ಪುರುಷರ ಮತ್ತು ಮಹಿಳಾ ವಿಭಾಗದಲ್ಲೂ ಟೀಮ್​ ಚಾಂಪಿಯನ್​ಷಿಪ್​ ಗೆದ್ದುಕೊಂಡಿತು. ರಾಜ್ಯ ತಂಡ ಪುರುಷರ ವಿಭಾಗದಲ್ಲಿ 5 ಚಿನ್ನ, 7 ಬೆಳ್ಳಿ, 8 ಕಂಚು ಮತ್ತು ಮಹಿಳೆಯರ ವಿಭಾಗದಲ್ಲಿ 10 ಚಿನ್ನ, 4 ಬೆಳ್ಳಿ, 5 ಕಂಚು ಒಲಿಸಿಕೊಂಡಿತು. ಕೂಟದ ಐದನೇ ಹಾಗೂ ಕೊನೇ ದಿನ ಕರ್ನಾಟಕ 2 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕ ಒಲಿಸಿಕೊಂಡಿತು. ಕೂಟದಲ್ಲಿ ಒಟ್ಟು 14 ಹೊಸ ದಾಖಲೆಗಳು ನಿರ್ಮಾಣಗೊಂಡವು.

ಧಿನಿಧಿ, ಶೋನ್​ಗೆ ಪ್ರಶಸ್ತಿ
ಕರ್ನಾಟಕದ ಈಜುಪಟುಗಳಾದ ಶೋನ್​ ಗಂಗೂಲಿ ಮತ್ತು ಧಿನಿಧಿ ದೇಸಿಂಘು ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು. ಶೋನ್​ ಮತ್ತು ಧಿನಿಧಿ ಕೂಟದಲ್ಲಿ ತಲಾ 2 ಕೂಟದಾಖಲೆ ನಿರ್ಮಿಸಿದ್ದರು.

ಶೋನ್​, ವಿಹಿತಾಗೆ ಚಿನ್ನ
ಕರ್ನಾಟಕದ ಶೋನ್​ ಗಂಗೂಲಿ ಕೂಟದ ಕೊನೇ ದಿನ ನೂತನ ಕೂಟದಾಖಲೆಯೊಂದಿಗೆ ಚಿನ್ನ ಗೆದ್ದರು. ಅವರು ಪುರುಷರ 400 ಮೀ. ಮೆಡ್ಲೆ ಸ್ಪರ್ಧೆಯಲ್ಲಿ 4 ನಿಮಿಷ, 24.64 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ, 2023ರಲ್ಲಿ ಆರ್ಯನ್​ ನೆಹ್ರಾ (4ನಿ, 25.62ಸೆ) ನಿರ್ಮಿಸಿದ್ದ ದಾಖಲೆ ಮುರಿದರು. ಮಹಿಳೆಯರ 100 ಮೀ. ಬ್ಯಾಕ್​ಸ್ಟ್ರೊಕ್​ ವಿಭಾಗದಲ್ಲಿ ರಾಜ್ಯದ ವಿಹಿತಾ ನಯನಾ ಲೋಗನಾಥನ್​ 1 ನಿಮಿಷ, 5.18 ಸೆಕೆಂಡ್​ಗಳಲ್ಲಿ ಈಜಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು.

ಪುರುಷರ 100 ಮೀ. ಬ್ಯಾಕ್​ಸ್ಟ್ರೊಕ್​ ವಿಭಾಗದಲ್ಲಿ ಕರ್ನಾಟಕದ ಉತ್ಕರ್ಷ್​ ಸಂತೋಷ್​ ಪಾಟೀಲ್​ (56.29 ಸೆ) ಬೆಳ್ಳಿ ಮತ್ತು ಆಕಾಶ್​ ಮಣಿ (56.35ಸೆ) ಕಂಚು ಜಯಿಸಿದರು. ಪುರುಷರ 100 ಮೀ. ಫ್ರೀಸ್ಟೈಲ್​ ವಿಭಾಗದಲ್ಲಿ ತನಿಷ್​ ಜಾರ್ಜ್​ ಮ್ಯಾಥ್ಯೂ (51.30ಸೆ) ಬೆಳ್ಳಿ ಗೆದ್ದರು. ಮಹಿಳೆಯರ 800 ಮೀ. ಫ್ರೀಸ್ಟೈಲ್​ ವಿಭಾಗದಲ್ಲಿ ರಾಜ್ಯದ ಅದಿತಿ ಎನ್​. ಮುಲಯ್​ (9ನಿ, 21.55ಸೆ) 4ನೇ ಸ್ಥಾನದೊಂದಿಗೆ ಪದಕ ವಂಚಿತರಾದರು.

 

 

 

 

 

 

Share This Article

ಯಾರಾದರೂ ನಿಮ್ಮ ಮುಂದೆ ಹಠಾತ್​ ಕುಸಿದುಬಿದ್ರೆ ಏನು ಮಾಡಬೇಕು ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ… Suddenly Collapsed

Suddenly Collapsed : ನೀವು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರಾದರು ಒಬ್ಬರು ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು…

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…