ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂಪನ್ನ

ಮಡಿಕೇರಿ: ‘ಜೀವನದಿ’ ಕಾವೇರಿ ಉಗಮ ಸ್ಥಳ ತಲಕಾವೇರಿಯಲ್ಲಿ ನಡೆಯುವ ವಾರ್ಷಿಕ ಪವಿತ್ರ ತೀರ್ಥೋದ್ಭವ ಇಂದು ಬೆಳಗ್ಗೆ 7.05 ಕ್ಕೆ ಸಂಪನ್ನವಾಗಿದೆ. ಅದಕ್ಕೂ ಮುಂಚಿತವಾಗಿ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಪುನಸ್ಕಾರಗಳು ನೆರವೇರಿಸಿದ್ದು, ಸರಿಯಾದ ಸಮಯಕ್ಕೆ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವ ಸಂಪನ್ನವಾಗಿದೆ. ಈ ಬಾರಿ ಕರೊನಾ ಕಾರಣಕ್ಕೆ ಸರಳವಾಗಿ ತೀರ್ಥೋದ್ಭವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಆಹ್ವಾನಿತರಷ್ಟೇ ಕಾರ್ಯಕ್ರಮದ ಸಂದರ್ಭದಲ್ಲಿ ಹಾಜರಿದ್ದರು. ತೀರ್ಥೋದ್ಭವದ ಬಳಿಕ ಭಕ್ತರಿಗೆ ಪ್ರವೇಶಾವಕಾಶ ನೀಡಲಾಗಿದ್ದು, ಕೋವಿಡ್ -19 ಟೆಸ್ಟ್ ಮಾಡಿಸಿ ನೆಗೆಟಿವ್​ ಪ್ರಮಾಣ ಪತ್ರ ಹೊಂದಿದವರಿಗಷ್ಟೇ ಒಳಗೆ ಪ್ರವೇಶಕ್ಕೆ ಅವಕಾಶ … Continue reading ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂಪನ್ನ