ಕಬ್ಬು ಬೆಳೆಗಾರರಿಗೆ ಸಿಹಿ: 27 ಹೊಸ ಕಾರ್ಖಾನೆಗೆ ಪ್ರಸ್ತಾವನೆ, ವಿದೇಶದಲ್ಲಿ ಅಧ್ಯಯನಕ್ಕೆ ರೈತ ತಂಡ

ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿಯೊಂದಿದೆ. ಹೊಸದಾಗಿ 27 ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ನಿಯಮಾನುಸಾರ ಪರಿಶೀಲಿಸಿ ಶೀಘ್ರ ಅನುಮತಿ ನೀಡುವ ಪ್ರಕ್ರಿಯೆ ಬಿರುಸಿನಿಂದ ನಡೆದಿದೆ. ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದದಲ್ಲಿ ಸಕ್ಕರೆ ಮತ್ತು ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಈ ವಿಷಯ ತಿಳಿಸಿದರು. ಬದಲಾದ ತಂತ್ರಜ್ಞಾನ, ಉಪ ಉತ್ಪನ್ನಗಳಿಗೆ ವಿಪುಲ ಅವಕಾಶ, ಎಥೆನಾಲ್​ಗೆ ಉತ್ತೇಜನದಿಂದ ಸಕ್ಕರೆ ಉದ್ಯಮ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ಲಾಭದ ಹಳಿಗೆ ಬಂದಿರುವುದರಿಂದ ಹೆಚ್ಚೆಚ್ಚು ಉದ್ಯಮಿಗಳು … Continue reading ಕಬ್ಬು ಬೆಳೆಗಾರರಿಗೆ ಸಿಹಿ: 27 ಹೊಸ ಕಾರ್ಖಾನೆಗೆ ಪ್ರಸ್ತಾವನೆ, ವಿದೇಶದಲ್ಲಿ ಅಧ್ಯಯನಕ್ಕೆ ರೈತ ತಂಡ