ಜಾನಪದ ರಂಗಭೂಮಿಗೆ ಆಧಾರವಾಗಿದ್ದರು ಸುಂಕಾಪುರ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ಡಾ. ಎಂ.ಎಸ್​. ಸುಂಕಾಪುರ ಸಾಹಿತ್ಯದಲ್ಲಿ ನವರಸಗಳ ಜೀವಂತಿಕೆ ಇದೆ. ಜಾನಪದ ರಂಗಭೂಮಿಗೆ ಅವರು ಆಧಾರ ಸ್ತಂಭವಾಗಿದ್ದರು ಎಂದು ಹಿರಿಯ ಸಾಹಿತಿ ಡಾ. ರುದ್ರಣ್ಣ ಚಿಲುಮಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಇತ್ತೀಚೆಗೆ ಆಯೋಜಿಸಿದ್ದ ಡಾ. ಎಂ. ಎಸ್​. ಸುಂಕಾಪುರ ದತ್ತಿ ನಿಮಿತ್ತ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎಂ.ಎಸ್​. ಸುಂಕಾಪುರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.
ಡಾ. ಎಂ. ಎಸ್​. ಸುಂಕಾಪುರ ಕನ್ನಡ ಸಾಹಿತ್ಯ ಲೋಕದ ಹಾಸ್ಯ ಪ್ರಕಾರದ ಸಾಹಿತಿಗಳಲ್ಲೊಬ್ಬರು. ಪ್ರಾಧ್ಯಾಪಕರಾದ ಅವರು ಕಠಿಣ ವಿಷಯಗಳನ್ನು ಹಾಸ್ಯಭರಿತವಾಗಿ ಹೇಳುವ ಕಲೆ ಕರಗತ ಮಾಡಿಕೊಂಡಿದ್ದರು. ಸಮಾಜವನ್ನು ಹಾಸ್ಯದ ಮೂಲಕವೇ ತಿದ್ದುವ, ಜಾಗೃತಗೊಳಿಸುವ ಶಕ್ತಿ ಇತ್ತು ಎಂದರು.
ನಿವೃತ್ತ ಇಂಜಿನಿಯರ್​ ಎಫ್​.ಐ. ಚನ್ನಪ್ಪಗೌಡರ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಜಯಶ್ರೀ ಚನ್ನಪ್ಪಗೌಡರ, ಶ್ರೀನಿವಾಸ ವಾಡಪ್ಪಿ, ಕೆ.ಎಂ. ಅಂಗಡಿ, ವಿ.ಬಿ. ಸಂತೋಜಿ, ಸಿ.ಎಂ. ಕುಂದಗೋಳ, ಪುಷ್ಪಾ ಪಾಟೀಲ, ಮಧುಮತಿ ಸಣಕಲ್​, ಎಂ.ಎಸ್​. ನರೇಗಲ್​, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಸತೀಶ ತುರಮರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ವಂದಿಸಿದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…