ಸುನಿತಾ ವಿಲಿಯಮ್ಸ್ ಸಾಧನೆ ಮಾದರಿ

arya

ಶಿವಮೊಗ್ಗ: ಭಾರತ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಸಹ ಗಗನ ಯಾತ್ರಿಗಳು ಸುರಕ್ಷಿತವಾಗಿ ಭೂಮಿಗೆ ಮರಳಿದ ಹಿನ್ನೆಲೆಯಲ್ಲಿ ಎಲ್‌ಬಿಎಸ್ ನಗರದ ಆರ್ಯ ವಿಜ್ಞಾನ ಪಿಯು ಕಾಲೇಜಿನಲ್ಲಿ ಬುಧವಾರ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, ಗುಜರಾತ್ ಮೂಲದ ಸುನೀತಾ ವಿಲಿಯಮ್ಸ್, ಎಂಟು ದಿನಗಳ ಅವಧಿಗೆ ಬಾಹ್ಯಾಕಾಶಕ್ಕೆ ತೆರಳಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ 285 ದಿನಗಳನ್ನು ಅಲ್ಲಿಯೇ ಇರಬೇಕಾಯಿತು. ಈಗ ಸವಾಲನ್ನು ಜಯಸಿ ಭೂಮಿಗೆ ಮರಳಿದ್ದಾರೆ. ನಮ್ಮ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಸುನಿತಾ ವಿಲಿಯಮ್ಸ್ ಸಾಧನೆ ಮಾದರಿಯಾಗಿದೆ ಎಂದು ಹೇಳಿದರು.
ವೈಜ್ಞಾನಿಕ ಚಿಂತಕ ಡಾ. ಶೇಖರ್ ಗೌಳೇರ್ ಮಾತನಾಡಿ, ಸುನಿತಾ ವಿಲಿಯಮ್ಸ್ ಮತ್ತವರ ತಂಡದ ಆಗಮನ ಇಡೀ ಪ್ರಪಂಚಕ್ಕೆ ಸಂಭ್ರಮ ತಂದಿದೆ. ವಿಶ್ವದಲ್ಲಿ ಸ್ಪೇಸ್ ವಾಕ್ ಮಾಡಿದವರ ಪೈಕಿ ಸುನೀತಾ ನಾಲ್ಕನೇಯವರು. 60ರ ಅಂಚಿನಲ್ಲಿರುವ ಅವರು ಅಂತರಿಕ್ಷ ಪ್ರಯಾಣ ಮಾಡಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು 285 ದಿನಗಳ ಕಾಲ ಬದುಕಿ ಬಂದಿದ್ದು ಸಾಧನೆಯೇ ಸರಿ ಎಂದರು.
ಶಿವಮೊಗ್ಗ ಬಿಇಒ ರಮೇಶ್ ಮಾತನಾಡಿ, ಸುನಿತಾ ವಿಲಿಯಮ್ಸ್ ಮಾಡಿರುವ ಸಾಧನೆಗೆ ಆರ್ಯ ವಿಜ್ಞಾನ ಕೇಂದ್ರದ ಮಕ್ಕಳು ಸಂಭ್ರಮಿಸುತ್ತಿರುವುದು ಸಮಯೋಚಿತ. ಈ ಕಾಲೇಜಿನ ವಿದ್ಯಾರ್ಥಿಗಳೂ ಭವಿಷ್ಯದಲ್ಲಿ ಹೆಚ್ಚಿನ ಸಾಧನೆ ಮಾಡಲಿ. ಅದಕ್ಕೆ ಸುನಿತಾ ಬದುಕು ಪ್ರೇರಣೆಯಾಗಲಿ ಎಂದು ಆಶಿಸಿದರು.

blank
Share This Article

ಬೇಸಿಗೆಯಲ್ಲಿ ಕೋಳಿ ಅಥವಾ ಮೀನು?; ತಿನ್ನಲು ಯಾವ ಮಾಂಸ ಉತ್ತಮ? ಇಲ್ಲಿದೆ ಮಾಹಿತಿ.. | Meat

Meat : ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಧಿಕ ಜನರು ತಂಪುಪಾನಿಯಗಳನ್ನು ಸೇವಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಿನವರು ಹಗುರವಾದ(ಮೃದುವಾದ)…

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…