ಭಾನುವಾರ ಉಚಿತ ಆರೋಗ್ಯ ಶಿಬಿರ

blank

ರಾಮದುರ್ಗ: ಪಟ್ಟಣದ ಸ್ಟೇಟ್​ ಸಂಯುಕ್ತ ಪದವಿ ಪೂರ್ವ ಕಾಲೇಜು ಮೆದಾನದಲ್ಲಿ ಡಿ.8ರಂದು 9.30ಕ್ಕೆ ಪರಪ್ಪ ಮುತ್ಯಾರ 2ನೇ ತಾಲೂಕುಮಟ್ಟದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಕೆಎಲ್​ಇ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅಲ್ಲಮಪ್ರಭು ಕುಡಚಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ರಾಮದುರ್ಗ ಡಾ.ರಾಜೇಂದ್ರ ಮುತ್ಯಾ ಪುಣ್ಯಾಶ್ರಮ ಸೇವಾ ಟ್ರಸ್ಟ್​ , ಕೆಎಲ್​ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿಯ ವೆದ್ಯಕಿಯ ಸಂಶೋಧನಾಲಯ, ಜೆಎನ್​ಎಂಸಿ, ತಾಲೂಕು ಆಸ್ಪತ್ರೆ, ಐಎಂಎ, ಎಎ್​ಐ, ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ, ಪುನೀತ ೌಂಡೇಷನ್​, ಜನಸಾಮಾನ್ಯರ ಹಿತರಣಾ ಸಮಿತಿ ಹಾಗೂ ವಿವಿಧ ಸಂಟನೆಗಳ ಆಶ್ರಯದಲ್ಲಿ ಶಿಬಿರ ನೆರವೇರಲಿದೆ. ಹದ್ರೋಗ, ನರರೋಗ, ಕ್ಯಾನ್ಸರ್​, ಸ್ತ್ರೀರೋಗ, ಚಿಕ್ಕಮಕ್ಕಳ, ಶಸ್ತ್ರ ಚಿಕಿತ್ಸಕರು, ಕಿವಿ, ಮೂಗು, ಗಂಟಲು, ನೇತ್ರ, ಮೂತ್ರಪಿಂಡ, ಚರ್ಮರೋಗ ಸೇರಿ ವಿವಿಧ ವಿಭಾಗದ ತ ವೆದ್ಯರು ಇರಲಿದ್ದು. ಜನರು ಶಿಬಿರದ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಉದ್ಘಾಟನೆ ಸಮಾರಂಭಕ್ಕೆ ಡಾ.ರಾಜೇಂದ್ರ ಶಿವಯೋಗಿ ಮುತ್ಯಾ ಸಾನ್ನಿಧ್ಯದಲ್ಲಿ ಬೆಳಗಾವಿ ವೆದ್ಯ ಡಾ. ಮಲ್ಲಿಕಾರ್ಜುನ ಖಾನಪೇಟ ಉದ್ಘಾಟಿಸುವರು. ಮಧ್ಯಾಹ್ನ 4 ಗಂಟೆಗೆ ವೆದ್ಯರಿಗೆ ವೆದ್ಯಾಮತ ಸನ್ಮಾನ ಸಮಾರಂಭವಿದೆ. ಡಾ.ರಾಜೇಂದ್ರ ಶಿವಯೋಗಿ ಮುತ್ಯಾ ಸಾನ್ನಿಧ್ಯ ವಹಿಸುವರು. ಪ್ರಭುಸ್ವಾಮಿ ಸರಗಣಾಚಾರಿ ಅಧ್ಯತೆ ವಹಿಸಲಿದ್ದು, ಶಾಸಕ ಅಶೋಕ ಪಟ್ಟಣ, ಟಿಎಚ್​ಒ ಡಾ.ನವೀನ ನಿಜಗುಲಿ, ಡಾ.ದೇವರಾಜ ಪಾಟೀಲ, ಡಾ.ಪ್ರಕಾಶ ರಾಮನಗೌಡರ, ಡಾ.ಶಿವಲೀಲಾ ಕಂಬಿ, ಮಲ್ಲಣ್ಣ ಯಾದವಾಡ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು. ಡಾ.ರಾಜೇಂದ್ರ ಶಿವಯೋಗಿ ಮುತ್ಯಾ, ತಾಲೂಕು ವೆದ್ಯಾಧಿಕಾರಿ ಡಾ. ನವೀನ ನಿಜಗುಲಿ, ಡಾ. ಮತ್ಯುಂಜಯ ಅಣ್ಣಾನವರ, ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ ಅಧ್ಯ ಡಾ.ಬಿ.ಎಲ್​. ಸಂಕನಗೌಡರ, ಪುನೀತ ೌಂಡೇಷನ್​ ಅಧ್ಯ ರಾಜು ಹರ್ಲಾಪುರ, ಶಾಮಣ್ಣ ಧಡಿಗೌಡ್ರ, ಜನಸಾಮಾನ್ಯರ ಹಿತರಣಾ ಸಮಿತಿ ಅಧ್ಯ ಈರಣ್ಣ ಕಲ್ಯಾಣಿ ಇತರರಿದ್ದರು.

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…