ಗುಜರಾತ್​ನಲ್ಲಿ ಕೋವಿಡ್​ನಿಂದ ಗುಣಮುಖರಾದವರೂ ಹಠಾತ್ತನೆ ಸಾಯುತ್ತಿರುವುದು ಏಕೆ?

ಅಹಮದಾಬಾದ್​/ಸೂರತ್​: ಗುಜರಾತ್​ನಾದ್ಯಂತ ಕೋವಿಡ್​ನಿಂದ ಗುಣಮುಖರಾಗಿ ಮನೆ ಸೇರಿದ ಕೆಲವೇ ಗಂಟೆಗಳಲ್ಲಿ ಜನರು ಹಠಾತ್ತನೆ ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣ ಏನೆಂಬುದು ತಿಳಿಯದೆ ವೈದ್ಯರು ಕಂಗಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸೂರತ್​ ಮಹಾನಗರ ಪಾಲಿಕೆಯ ಎಸ್​ಎಂಐಎಂಇಆರ್​ ಆಸ್ಪತ್ರೆಯಲ್ಲಿ ಕೋವಿಡ್​-19 ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ಪುಣ ಬಡಾವಣೆ ನಿವಾಸಿ ಹೆಮೆಬೆನ್​ ಚೊವಾಟಿಯಾ (70) ಜುಲೈ 17ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಮನೆಗೆ ಮರಳಿದ್ದ ಅವರು ಕೆಲಗಂಟೆಗಳವರೆಗೆ ಮನೆಯವರ ಜತೆ ಚೆನ್ನಾಗಿ ಮಾತನಾಡಿದ್ದರು. ಆದರೆ ಹಠಾತ್ತನೆ ಕುಸಿದು ಬಿದ್ದ ಅವರು ಇಹಲೋಕವನ್ನೇ ತ್ಯಜಿಸಿದ್ದರು. ಅಧಿಕರಕ್ತದೊತ್ತಡದಿಂದ ಬಳಲುತ್ತಿದ್ದರೂ … Continue reading ಗುಜರಾತ್​ನಲ್ಲಿ ಕೋವಿಡ್​ನಿಂದ ಗುಣಮುಖರಾದವರೂ ಹಠಾತ್ತನೆ ಸಾಯುತ್ತಿರುವುದು ಏಕೆ?