ಸುದರ್ಶನ ಕ್ರಿಯಾದಿಂದ ಆರೋಗ್ಯ ವೃದ್ಧಿ

Sudarshan Cria Health Devolpment

ವಿಜಯಪುರ: ಮನಸ್ಸು ಮತ್ತು ದೇಹ ಶುದ್ಧಿಯಾಗಿದ್ದರೆ ಮಾತ್ರ ಉನ್ನತ ಬದುಕು ಸಾಗಿಸಲು ಸಾಧ್ಯ ಎಂದು ಬೆಂಗಳೂರಿನ ಆರ್ಟ್ ಆಫ್ ಲೀವಿಂಗ್‌ನ ಬಿ.ಎಂ. ಪಾಟೀಲ ಗುರೂಜಿ ಹೇಳಿದರು.

ನಗರದ ಕನಕದಾಸ ಬಡಾವಣೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದರ್ಶನ ಕ್ರಿಯಾ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳಿಂದ ಜೀವನದಲ್ಲಿ ಸಾಧನೆ ಮಾಡಲು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಲಹೆ ನೀಡಿದರು.

ಪರಿಶುದ್ಧ ಗಾಳಿಯೀ ಮನುಷ್ಯನ ಅರೋಗ್ಯಕ್ಕೆ ಪ್ರಮುಖ ಜೀವಾಳ. ಉಸಿರಾಟದ ಮೂಲಕ ಶುದ್ಧ ಅಮ್ಲಜನಕ ಸೇವಿಸಬೇಕು. ದೀರ್ಘ, ಸರಳ ಉಸಿರಾಟದ ಪ್ರಕ್ರಿಯೆ ಮೂಲಕ ಶರೀರದಲ್ಲಿ ಪ್ರಾಣಶಕ್ತಿ ಸಂಚಲನವಾದಾಗ ಮನುಷ್ಯ ಕ್ರಿಯಾಶೀಲನಾಗುತ್ತಾನೆ. ಇದು ಆರ್ಟ್ ಆಫ್ ಲೀವಿಂಗ್‌ನ ಸಂಸ್ಥಾಪಕ ರವಿಶಂಕ ಗುರೂಜಿ ಅವರು ತಿಳಿಸಿದ ಸುದರ್ಶನ ಕ್ರಿಯೆ ಮೂಲಕ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ ಎಂದರು.

ಅತಿಥಿ ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಪ್ರತಿನಿತ್ಯ ಸುದರ್ಶನ ಕ್ರಿಯೆ ಅಳವಡಿಸಿಕೊಂಡರೆ ನಿರಾಳವಾಗಿ ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದರು.

ಡಾ. ವಿಜಯ ಮಹಾಂತ ದೇಸಾಯಿ, ಈರಣ್ಣ ಬಡಿಗೇರ, ಭಾಗ್ಯಾ ಬಿರಾದಾರ, ಹೇಮಲತಾ ಅಬ್ಬಿಗೇರ ಅನುಭವ ಹಂಚಿಕೊಂಡರು. ಚಂದ್ರಶೇಖರ ಸಿಂದೂರ ಸ್ವಾಗತಿಸಿದರು. ಮುದಕಪ್ಪ ಚವ್ಹಾಣ ನಿರೂಪಿಸಿದರು. ಸಹನಾ ಪಾಟೀಲ ವಂದಿಸಿದರು.

ಶಿಬಿರದಲ್ಲಿ ಬಸವರಾಜ ಬಡಿಗೇರ, ರಮೇಶ ಆಡಿನ, ಲಿಂಗಪ್ಪ ಮಸೂತಿ, ಡಾ. ಸಾವಿತ್ರಿ ಬಾಗೇವಾಡಿ, ಬಸಲಿಂಗಮ್ಮ ಮಸೂತಿ ಮತ್ತಿತರರಿದ್ದರು.

Share This Article

ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್​ ವಿಧಾನ | Recipe

ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…

ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ | Health Tips

ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…

ಟೊಮೆಟೊ ಸೇವನೆ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips

ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್​​.…