More

    ನಾಪತ್ತೆಯಾದ ಮಗನಿಗಾಗಿ ಪಾಲಕರು ಒಂದಿಡೀ ದಿನ ಹುಡುಕಾಡಿದ್ದರು..ಆದರೆ ಇಂದು…

    ದಾವಣಗೆರೆ: ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯೋರ್ವ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಕಣ್ವಕುಪ್ಪೆ ಗ್ರಾಮದಲ್ಲಿ ನಡೆದಿದೆ.

    ಪವನ್​​ (16) ಮೃತ ವಿದ್ಯಾರ್ಥಿ. ಈತ ಚಿಕ್ಕಮ್ಮನಹಟ್ಟಿ ಗ್ರಾಮದ ವಕೀಲ ಸಿ.ಬಸವರಾಜ್​ ಅವರ ಪುತ್ರನಾಗಿದ್ದು ಬೇಡರ ಕಣ್ಣಪ್ಪ ವಸತಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.

    ನಿನ್ನೆಯಿಂದಲೇ ನಾಪತ್ತೆಯಾಗಿದ್ದ ಪವನ್​ಗಾಗಿ ಪಾಲಕರು ಹುಡುಕಾಟ ನಡೆಸಿದ್ದರು. ಹೊಂಡದ ಬಳಿ ಅವನ ಚಪ್ಪಲಿಗಳು ಪತ್ತೆಯಾಗಿದ್ದವು. ಇಂದು ಶವಪತ್ತೆಯಾಗಿದೆ. ಹೊಂಡಕ್ಕೆ ಕೈಕಾಲು ತೊಳೆಯಲು ಹೋದಾಗ ಜಾರಿ ಬಿದ್ದಿರಬಹುದು ಎನ್ನಲಾಗಿದೆ.

    ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts