ಬ್ರಹ್ಮಾವರದಲ್ಲಿ ಕದ್ದರು, ಯಲ್ಲಾಪುರದಲ್ಲಿ ಸಿಕ್ಕಿಬಿದ್ದರು

blank

ಯಲ್ಲಾಪುರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಮಹಿಳೆಯೊಬ್ಬಳ ಆಭರಣ ಕದ್ದು ಪರಾರಿಯಾಗುತ್ತಿದ್ದ ಮೂವರು ಕಳ್ಳರನ್ನು ತಾಲೂಕಿನ ಹುಟುಕಮನೆ ಬಳಿ ಪೊಲೀಸರು ಬಂಧಿಸಿದ್ದಾರೆ.

blank

ಮೈನುದ್ದೀನ್, ಸೂರಜ್ ಹಾಗೂ ಗೌರೀಶ ಬಂಧಿತರು. ಇವರು ಬ್ರಹ್ಮಾವರದಲ್ಲಿ ಮಹಿಳೆಯೊಬ್ಬರ ಎರಡೂವರೆ ತೊಲ ಬಂಗಾರ ಕದ್ದುಕೊಂಡು ಯಲ್ಲಾಪುರದತ್ತ ಬಂದಿದ್ದರು. ಪ್ರಕರಣ ದಾಖಲಿಸಿಕೊಂಡು, ಬೆನ್ನತ್ತಿದ ಪೊಲೀಸರು ಯಲ್ಲಾಪುರ ಪೊಲೀಸರಿಗೆ ಮಾಹಿತಿ ನೀಡಿದರು. ತಟಗಾರ, ಹುಟುಕಮನೆ ಭಾಗಕ್ಕೆ ಅವರ ಕಾರು ಹೋದ ವಿಷಯ ತಿಳಿದ ಪೊಲೀಸರು, ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಹುಟುಕಮನೆ ಹಾಗೂ ತಟಗಾರ ಗ್ರಾಮಸ್ಥರು ಆ ಭಾಗದಲ್ಲಿ ಪೊಲೀಸರೊಂದೊಗೆ ಹುಟುಕಾಟ ಆರಂಭಿಸಿದರು. ಹುಟುಕಮನೆ ಬಳಿಯ ಕಚ್ಚಾ ರಸ್ತೆಯಲ್ಲಿ ದರೋಡೆಕೋರರ ಕಾರು ಗಟಾರಕ್ಕಿಳಿದಿದ್ದು, ಆ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ಬಳಿ ಸಿಕ್ಕಿಬಿದ್ದಿದ್ದಾರೆ.

ಮೂವರನ್ನು ಬಂಧಿಸಿದ ಪೊಲೀಸರು ಬ್ರಹ್ಮಾವರಕ್ಕೆ ಅವರನ್ನು ಕರೆದೊಯ್ದಿದ್ದಾರೆ.

Share This Article

ಕಣ್ಣಿನ ಸುತ್ತ ಕಪ್ಪು ಕಲೆಗಳ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಒಂದು ಕೆಲಸ ಮಾಡಿ..Dark Circles

Dark Circles :  ಕಣ್ಣಿನ ಸುತ್ತ ಕಾಣಿಸುವ ಕಪ್ಪು ಕಲೆಗಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಕಂಡು…

ಮಾವಿನ ಹಣ್ಣಿನ ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿದೆ…mangoes

mangoes : ಮಾವು ಹಣ್ಣುಗಳ ರಾಜ. ಎಲ್ಲರೂ ಮಾವಿನ ಹಣ್ಣುಗಳಿಗಾಗಿ ಬೇಸಿಗೆಯನ್ನು ಎದುರು ನೋಡುವುದರಲ್ಲಿ ಆಶ್ಚರ್ಯವಿಲ್ಲ.…

ಕೆಲವೇ ಗಂಟೆಗಳಲ್ಲಿ ಮೊಬೈಲ್​ ಬ್ಯಾಟರಿ​ ಖಾಲಿಯಾಗ್ತಿದ್ಯಾ? ಹಾಗಿದ್ರೆ ಈಗಲೇ ಈ ಸೆಟ್ಟಿಂಗ್​ಗಳನ್ನು ಆಫ್​ ಮಾಡಿ! | Battery Drain

Battery Drain: ಇದು ಸ್ಮಾರ್ಟ್​ಫೋನ್ ಯುಗ. ಹೊಟ್ಟೆಗೆ ಹಿಟ್ಟಿಲ್ಲದೆ ಹೋದರೂ ಮೊಬೈಲ್​ಗೆ ನೆಟ್ಟಿರಲೇಬೇಕು ಎನ್ನುವಂತ ಪರಿಸ್ಥಿತಿ…