ಶ್ರೀಶೈಲಂ ಜಲವಿದ್ಯುತ್​ ಘಟಕದ ಬೆಂಕಿ ದುರಂತ ಪ್ರಕರಣದ ತನಿಖೆ ಸಿಐಡಿಗೆ

ಶ್ರೀಶೈಲಂ ಜಲವಿದ್ಯುತ್​ ಸ್ಥಾವರದಲ್ಲಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಗುರುವಾರ ರಾತ್ರಿಯೇ ಬೆಂಕಿ ಹೊತ್ತಿಕೊಂಡಿದ್ದರೂ ಶುಕ್ರವಾರ ಬೆಳಗ್ಗೆವರೆಗೆ ಅಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಕಾರಣ ದಟ್ಟವಾದ ಹೊಗೆ ಆವರಿಸಿತ್ತು ಎಂದು ಪೊಲೀಸರೇ ಹೇಳಿದ್ದಾರೆ. ಇದೀಗ ಶ್ರೀಶೈಲಂ ಹೈಡಲ್​ ಬೆಂಕಿ ದುರಂತದ ತನಿಖೆಯನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು ಸಿಐಡಿಗೆ ವಹಿಸಿದ್ದಾರೆ. ಜಲವಿದ್ಯುತ್​ ಸ್ಥಾವರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದನ್ನು ತನಿಖೆ ಮಾಡಲು ತಿಳಿಸಿದ್ದಾರೆ. ಇದನ್ನೂ ಓದಿ: 18 … Continue reading ಶ್ರೀಶೈಲಂ ಜಲವಿದ್ಯುತ್​ ಘಟಕದ ಬೆಂಕಿ ದುರಂತ ಪ್ರಕರಣದ ತನಿಖೆ ಸಿಐಡಿಗೆ