ಶ್ರೀ ಶಂಕರಾಚಾರ್ಯರು ಧರ್ಮ ಪುನರುತ್ಥಾನಗೊಳಿಸಿದ ಮಹಾನುಭಾವ: ಗಾಡಿಕೆರೆ ಗೌತಮಿ ಮಧುಕರ

blank

ಶೃಂಗೇರಿ: ಹಿಂದು ಧರ್ಮವು ಅವನತಿಯ ಹಂತದಲ್ಲಿದ್ದಾಗ ಶ್ರೀ ಶಂಕರಾಚಾರ್ಯರು ಶಿವಸ್ವರೂಪಿ ರೂಪದಲ್ಲಿ ಅವತರಿಸಿ, ಹಿಂದು ಧರ್ಮದ ಪುನರುತ್ಥಾನ ಮಾಡಿದ ಮಹಾನುಭಾವರಾಗಿದ್ದಾರೆ ಎಂದು ಗಾಡಿಕೆರೆ ಗೌತಮಿ ಮಧುಕರ ಹೇಳಿದರು.

ತಾಲೂಕಿನ ಅಳಲೆಗುಡ್ಡ ಶ್ರೀ ವಿನಾಯಕ ದೇವಸ್ಥಾನದ ಆವರಣದಲ್ಲಿ ಶನಿವಾರ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ ಏರ್ಪಡಿಸಿದ್ದ ಶ್ರೀ ಶಂಕರ ಜಯಂತ್ಯುತ್ಸವದಲ್ಲಿ ಜಾಗೃತ ಪಂಚಕ ಹಾಗೂ ಮೋಹಮುದ್ಗರದ ವಿಶ್ಲೇಷಣೆ ಮಾಡಿ ಮಾತನಾಡಿದರು.
ಅದ್ವೈತ ತತ್ವವನ್ನು ಪ್ರತಿಪಾದಿಸಿದ ಶಂಕರರು ತಮ್ಮ ಅಲ್ಪ ಜೀವಿತಾವಧಿಯಲ್ಲಿ ದೇಶದ ಉದ್ದಗಲಕ್ಕೆ ಸಂಚರಿಸಿ ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರು. ತಮ್ಮ ಜೀವನ ನಂತರವೂ ಧರ್ಮ ಪ್ರಚಾರ ಮುಂದುವರಿಸಲು ದೇಶದ ನಾಲ್ಕು ದಿಕ್ಕಗಳಲ್ಲಿ ಆಮ್ನಾಯ ಪೀಠವನ್ನು ಸ್ಥಾಪಿಸಿದರು ಎಂದರು.
ಕೊಪ್ಪದ ಶ್ರೀ ಹರಿಹರ ನಾಮಸ್ಮರಣ ತಂಡದಿಂದ ಶ್ರೀ ಶಂಕರಾಚಾರ್ಯ ವಿರಚಿತ ಜಾಗೃತ ಪಂಚಕ ಹಾಗೂ ಮೋಹ ಮುದ್ಗರದ ಗಾಯನ ಹಾಗೂ ವಿಶ್ಲೇಷಣೆ ನಡೆಯಿತು. ಗಾಯಕರಾಗಿ ಪ್ರಮೀಳಾ ಪ್ರಭಾಕರ್, ರೂಪಾ ರಾಜೇಂದ್ರ, ಪ್ರತೀಕ್ಷಾ ಹಾಗೂ ವಿಶ್ಲೇಷಣೆಯನ್ನು ಗೌತಮಿ ಮಧುಕರ ಮಾಡಿದರು. ಗಾಡಿಕೆರೆ ಸತ್ಯನಾರಾಯಣ ಹಿಮ್ಮೇಳ ನಿರ್ವಹಿಸಿದರು. ಗುರುವಂದನಾ, ಶ್ರೀ ಶಂಕರ ಅಷ್ಟೋತ್ತರ ಪಠಣವನ್ನು ಸಾಮೂಹಿಕವಾಗಿ ನಡೆಸಲಾಯಿತು.
ಹೆಬ್ಬಾರ ಸಮಾಜದ ಅಧ್ಯಕ್ಷ ಎ.ಎಂ.ಶ್ರೀಧರ ರಾವ್, ಕಾರ್ಯದರ್ಶಿ ಅಶೋಕ್, ಮಹಾಸಭಾ ಉಪಾಧ್ಯಕ್ಷ ಹೆಬ್ಬಿಗೆ ಗಣೇಶ್, ವೆಂಕಟರಾವ್, ಸೋಮಣ್ಣ, ಕೃಷ್ಣಸ್ವಾಮಿ, ಅನ್ನಪೂರ್ಣ, ಶ್ರೀಲಕ್ಷ್ಮೀ, ಭಾಗ್ಯಲಕ್ಷ್ಮೀ, ಭಾರತಿ, ವಿಜಯಲಕ್ಷ್ಮೀ, ಕಲ್ಪನಾ, ಆರತಿ, ರಮಾದೇವಿ ಇತರರಿದ್ದರು.

Share This Article

ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್

ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…