ಬ್ಯಾಟರಾಯನಪುರದಲ್ಲಿ ಶ್ರೀರಾಮೋತ್ಸವ

ಬೆಂಗಳೂರು : ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಪನೆಯಾಗುತ್ತಿರುವುದರ ಹಿನ್ನೆಲೆಯಲ್ಲಿ ಎಲ್ಲೆಡೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಅಂತೆಯೇ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಶ್ರೀರಾಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಬ್ಯಾಟರಾಯನಪುರದ ಸ್ವಾಮಿ ವಿವೇಕಾನಂದ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವು ಸೋಮವಾರ (ಜ.22) ಸಂಜೆ 4 ಗಂಟೆಯಿಂದ ಆರಂಭವಾಗಲಿದ್ದು, ಗಾಯಕ ಶಶಿಧರ ಕೋಟೆಯವರು ಶ್ರೀರಾಮನ ಭಕ್ತಿಗೀತೆಗಳ ಭಜನೆ ನಡೆಸಿಕೊಡಲಿದ್ದಾರೆ. ಹಾಗೂ ವಿವಿಧ ಕಲಾವಿದರಿಂದ ಗಾಯನ, ಭರತನಾಟ್ಯ, ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಆಕರ್ಷಣೆಯಾಗಿ ತಿಂಡಿ ಮೇಳವನ್ನು ಆಯೋಜಿಸಲಾಗಿದ್ದು, ದೋಸೆ ಹಬ್ಬ, ಕಡಲೆಕಾಯಿ ಪರಿಷೆ, ಅವರೆಕಾಯಿ ಪರಿಷೆ … Continue reading ಬ್ಯಾಟರಾಯನಪುರದಲ್ಲಿ ಶ್ರೀರಾಮೋತ್ಸವ