ಬೈಲಹೊಂಗಲ: ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಬಸವ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಏ.28ರಿಂದ ಆರಂಭಗೊಂಡಿದ್ದು, ಮೇ 2ರ ವರೆಗೆ ಅದ್ದೂರಿಯಾಗಿ ಜರುಗಲಿದೆ. ಪ್ರತಿದಿನ 7ರಿಂದ 8.30ರ ವರೆಗೆ ಪ್ರವಚನ ಕಾರ್ಯಕ್ರಮ ಜರುಗಲಿದ್ದು, ಏ.29ರಂದು ಕುಂಭೋತ್ಸವ ಹಾಗೂ ಊಟದ ಹಾಲ್ ಉದ್ಘಾಟನೆ, ಏ.30ರಂದು ಶ್ರೀ ಬಸವೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಮೇ 1ರಂದು ಮಹಾರಥೋತ್ಸವ, ರಾತ್ರಿ 8 ಗಂಟೆಗೆ ರಸಮಂಜರಿ ಕಾರ್ಯಕ್ರಮ, ಮೇ2ರಂದು ಪ್ರವಚನ ಮಂಗಲೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
