ಮಧ್ವಾಚಾರ್ಯರ ಪ್ರತಿಮೆಗೆ ವಿಶೇಷ ಪೂಜೆ

ಕಂಪ್ಲಿಯ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಮಧ್ವ ನವಮಿ ನಿಮಿತ್ತ ಶ್ರೀ ಮಧ್ವಾಚಾರ್ಯರ ಪ್ರತಿಮೆ, ಸರ್ವಮೂಲಗ್ರಂಥದ ರಥೋತ್ಸವ ನಡೆಯಿತು. ಮಂಡಳಿ ಅಧ್ಯಕ್ಷ ಗೌಡ್ರು ಗೋಪಾಲಕೃಷ್ಣ, ಕಾರ್ಯದರ್ಶಿ ಅಗಸನೂರು ನಾಗರಾಜ, ಖಜಾಂಚಿ ಬಿ.ರಮೇಶ್, ಪ್ರಮುಖರಾದ ದಿಗ್ಗಾವಿ ಗುರುರಾಜಾಚಾರ್, ಕಾಕುಕಾಳ್ ಶ್ರೀಕಾಂತಾಚಾರ್ ಇತರರಿದ್ದರು.

ಕಂಪ್ಲಿ: ಪಟ್ಟಣದಲ್ಲಿ ಶ್ರೀ ಮಧ್ವ ನವಮಿ ನಿಮಿತ್ತ ಗುರುವಾರ ಶ್ರೀ ಮಧ್ವಾಚಾರ್ಯರ ಪ್ರತಿಮೆಗೆ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

ಇದನ್ನೂ ಓದಿ:ದೇವರ ಪೂಜೆಯಿಂದ ಸಂಸ್ಕಾರ ಲಭ್ಯ

ಬೆಳಗ್ಗೆ ಕೋಟೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯಸ್ವಾಮಿ ಪ್ರತಿಮೆಗೆ ಪೂಜೆ, ಮಧು ಅಭಿಷೇಕ, ವಾಯುಸ್ತುತಿ ಪಾರಾಯಣ, ಸಮಗ್ರ ಸರ್ವಮೂಲಗ್ರಂಥ ಪಾರಾಯಣ, ಪಂಚಾಮೃತಾಭಿಷೇಕ ನೆರವೇರಿದವು. ಮಧ್ಯಾಹ್ನ ಬ್ರಾಹ್ಮಣಬೀದಿಯಲ್ಲಿನ ಶ್ರೀ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಗುರುರಾಜ ಸೇವಾ ಮಂಡಳಿಯಿಂದ ಅರ್ಚಕ ರಾಮಚಾರ್ ಜೋಯಿಸ್ ಪೌರೋಹಿತ್ಯದಲ್ಲಿ ವಾಯುದೇವರು, ಮಧ್ವಾಚಾರ್ಯರು, ಸರ್ವಮೂಲಗ್ರಂಥವನ್ನು ರಥದಲ್ಲಿರಿಸಿ ರಥೋತ್ಸವ ನಡೆಸಲಾಯಿತು. ಅಮೃತಶಿಲಾ ರಾಮಚಂದ್ರ, ಸೀತೆ, ಲಕ್ಷ್ಮಣ, ಆಂಜನೇಯ ಪ್ರತಿಮೆಗಳನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ನಂತರ ಅನ್ನ ಸಂತರ್ಪಣೆ ನಡೆಯಿತು.
ಮಂಡಳಿ ಅಧ್ಯಕ್ಷ ಗೌಡ್ರು ಗೋಪಾಲಕೃಷ್ಣ, ಕಾರ್ಯದರ್ಶಿ ಅಗಸನೂರು ನಾಗರಾಜ, ಖಜಾಂಚಿ ಬಿ.ರಮೇಶ್, ಪ್ರಮುಖರಾದ ದಿಗ್ಗಾವಿ ಗುರುರಾಜಾಚಾರ್, ಕಾಕುಕಾಳ್ ಶ್ರೀಕಾಂತಾಚಾರ್ ಇತರರಿದ್ದರು.

TAGGED:
Share This Article

1 ರೂ. ಖರ್ಚು ಮಾಡದೆ ನಿಮ್ಮ ಕೂದಲು ದಪ್ಪವಾಗಿ, ಸೊಂಪಾಗಿ ಬೆಳೆಯಲು ಏನು ಮಾಡಬೇಕೆಂದು ನಿಮಗೆ ತಿಳಿದಿದೆಯೇ? Hair Tips

Hair Tips: ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೂದಲು ಉದುರುವುದನ್ನು…

ಬೇಸಿಗೆಯಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದೀರಾ? ಈ ವಿಷಯ ನೆನಪಿರಲಿ… traveling at night

traveling at night : ರಾತ್ರಿಯಲ್ಲಿ  ಹೆಚ್ಚಿನ ರಸ್ತೆಗಳು ಖಾಲಿಯಾಗಿರುತ್ತವೆ, ಸಂಚಾರ ಕಡಿಮೆ ಇರುತ್ತದೆ ಮತ್ತು ಪ್ರಯಾಣವನ್ನು…

ಮಾರ್ಚ್​ 29ರಂದು ಷಷ್ಠ ಗ್ರಹ ಕೂಟ… ಅಪ್ಪಿತಪ್ಪಿಯೂ ಆ ದಿನ ಈ ತಪ್ಪುಗಳನ್ನು ಮಾಡಬೇಡಿ! Shasta Graha Koota

Shasta Graha Koota : ಮಾರ್ಚ್ 29ರಂದು ಸೂರ್ಯಗ್ರಹಣ ಸಂಭವಿಸಲಿದೆ. ಅದೇ ದಿನ ಷಷ್ಠ ಗ್ರಹ…