ಬೆಲಹೊಂಗಲ: ಮಾಜಿ ಸೆನಿಕರ ಸಮನ್ವಯ ಸಮಿತಿ ಸದಸ್ಯರು ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮನ ವತ್ತದಿಂದ ಐತಿಹಾಸಿಕ ಕರಿಗುಡಿಯ ರಾಮಲಿಂಗಶ್ವರ ದೇವಸ್ಥಾನದ ವರೆಗೆ ತಿರಂಗಾ ಬೆಕ್ ಜಾಥಾ ನಡೆಸಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ರಾಮಲಿಂಗೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸಿ ಭಾರತ ಸೈನಿಕರಿಗೆ ಆಶೀರ್ವದಿಸಿ ಎಂದು ಪ್ರಾರ್ಥಿಸಿದರು.

ಸಂದ ಅಧ್ಯ ಬಿ.ಬಿ. ಬೋಗೂರ ಮಾತನಾಡಿ, ಭಾರತೀಯ ರಣಾ ವ್ಯವಸ್ಥೆ ಬಲಾಢ್ಯವಾಗಿದೆ. ಪಾಕಿಸ್ತಾನ ಉಗ್ರಗಾಮಿಗಳನ್ನು ಒಪ್ಪಿಸಿ ಪಿಒಕೆ ಭಾರತದ ಅವಿಭಾಜ್ಯ ಅಂಗ ಎಂದು ಒಪ್ಪಂದ ಮಾಡಿಕೊಂಡರೆ ಮಾತ್ರ ಭಾರತ ಕದನವಿರಾಮಕ್ಕೆ ಒಪ್ಪಬೇಕು. ಯುದಟಛಿಕ್ಕೆ ಕರೆ ಬಂದರೆ ನಾವು ಸಿದಟಛಿರಿದ್ದೇವೆ ಎಂದರು. ವಕೀಲ ಎ್.ಎಸ್. ಸಿದ್ದನಗೌಡರ ಮಾತನಾಡಿ, ಪಾಕಿಸ್ತಾನ ಕಪಟ ನೀತಿಯಿಂದ ಕದನ ವಿರಾಮಕ್ಕೆ ಒಪ್ಪಿ ಇನ್ನೊಂದೆಡೆ ಡ್ರೋನ್ ದಾಳಿ ಮಾಡಿ ಕಪಟತನ ಪ್ರದರ್ಶಿಸಿದೆ ಎಂದು ಕಿಡಿಕಾಡಿದರು.
ಮಾಜಿ ಸೆನಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಸಂದ ಉಪಾಧ್ಯ ಚಂದ್ರಶೇಖರ ನೇಸರಗಿ, ಶೇಖರ ನವಲಗಟ್ಟಿ, ದೇಮಪ್ಪ ಶಿರಗಾಂವಿ, ರಾಜಕುಮಾರ ಸವಟಗಿ, ಪುರಸಭೆ ಮಾಜಿ ಅಧ್ಯ ಬಸವರಾಜ ಜನ್ಮಟ್ಟಿ, ಮಂಜುನಾಥ ಬಾಗೆವಾಡಿ, ಶಂಕರ ಬೇವಿನ, ಸುರೇಶ ಕಂಬಾರ, ಚಂದ್ರಗೌಡ ಪಾಟೀಲ, ಶಿವಾನಂದ ಹಡಪದ, ಎಸ್.ಎಂ. ಪಾಟೀಲ, ಗೀತಾ ಗರಗದ, ಮಾಲಾ ಸಂಗಣ್ಣವರ ಇತರರಿದ್ದರು.