ಮೇ.01ರಂದು ದಕ್ಷಿಣ ಭಾರತದ ಈ 4 ಸಿನಿಮಾಗಳು ತೆರೆಗೆ; ಯಾವ ಭಾಷೆಯ ಚಿತ್ರಗಳು ರಿಲೀಸ್​? ಇಲ್ಲಿದೆ ಮಾಹಿತಿ | South Films

blank

South Films: ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸಿನಿಮಾಗಳು ಪ್ರತಿವಾರ ತೆರೆಗೆ ಅಪ್ಪಳಿಸುತ್ತಿದ್ದು, ಅವುಗಳಲ್ಲಿ ಕೆಲವು ಹಿಟ್​ ಆದರೆ, ಇನ್ನೂ ಕೆಲವು ಫ್ಲಾಪ್​ ಸಾಲಿಗೆ ಸೇರುತ್ತಿವೆ. ಚಿತ್ರಗಳ ಸೋಲುಗಳು ಆಯಾ ಚಿತ್ರತಂಡಕ್ಕೆ ಹಾಗೂ ಚಿತ್ರರಂಗಕ್ಕೆ ದೊಡ್ಡ ಮಟ್ಟದ ಹೊಡೆತ ನೀಡುತ್ತಿದೆ. ಈ ಸೂಕ್ಷ್ಮ ವಿಚಾರ ಅರಿಯುವಲ್ಲಿ ಚಿತ್ರಪ್ರೇಮಿಗಳು ಹಿಂದುಳಿದಿದ್ದಾರೆ. ಕಾರಣ, ಚಿತ್ರಮಂದಿರದಲ್ಲಿ ತೆರೆಕಂಡ ಸಿನಿಮಾಗಳನ್ನು ಥಿಯೇಟರ್​ನಲ್ಲಿಯೇ ನೋಡುವ ಬದಲಿಗೆ ಒಟಿಟಿ ಅಥವಾ ಪೈರೆಸಿ ವಿಡಿಯೋ ಬರುವವರೆಗೂ ಕಾದು ವೀಕ್ಷಿಸುವುದು ಅತ್ಯಂತ ಬೇಸರದ ಸಂಗತಿ.

blank

ಇದನ್ನೂ ಓದಿ: ಅಮೆರಿಕಾದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣನಾದ ಮೈಸೂರಿನ ಉದ್ಯಮಿ

ಕಳೆದ ಕೆಲವು ವಾರಗಳಿಂದ ದಕ್ಷಿಣ ಭಾರತ ಚಿತ್ರರಂಗದ ಬಹುತೇಕ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಷ್ಟಾಗಿ ಕಮಾಲ್ ಮಾಡಿಲ್ಲ. ಇತ್ತೀಚೆಗಷ್ಟೇ ರಿಲೀಸ್ ಆದ ಮೋಹನ್ ಲಾಲ್ ಅಭಿನಯದ ‘ಎಂಪುರಾನ್’​ ಚಿತ್ರ ಬಿಡುಗಡೆಗೂ ಮುನ್ನ ಭಾರೀ ವಿವಾದಕ್ಕೆ ಸಿಲುಕಿದ್ದೇ ಆದರೂ ಸದ್ಯ ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆ ಕಂಡಿದೆ. ಇದು ಚಿತ್ರತಂಡಕ್ಕೆ ಸಕ್ಸಸ್​ ತಂದುಕೊಟ್ಟಿದೆ. ಪ್ರಸ್ತುತ ನಾಲ್ಕು ಬಹುನಿರೀಕ್ಷಿತ ಸಿನಿಮಾಗಳು ಮೇ.01ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದ್ದು, ಪ್ರೇಕ್ಷಕರ ಗಮನ ಸೆಳೆಯಲು ಎದುರು ನೋಡುತ್ತಿವೆ.

ತೆರೆಕಾಣಲಿರುವ ದಕ್ಷಿಣ ಭಾರತದ 4 ಸಿನಿಮಾಗಳು

1. HIT: 3 ( ತೆಲುಗು)

ಕಲಾವಿದರು: ನಟ ನಾನಿ, ನಟಿ ಶ್ರೀನಿಧಿ ಶೆಟ್ಟಿ, ರಾವ್ ರಮೇಶ್
ನಿರ್ದೇಶಕ: ಶೈಲೇಶ್ ಕೊಲನು

ಒಂದು ಆಕ್ಷನ್ ಥ್ರಿಲ್ಲರ್ ಜಾನರ್​ ಚಿತ್ರ ಇದಾಗಿದ್ದು, ನಟ ನಾನಿ ಅರ್ಜುನ್ ಸರ್ಕಾರ್ ಎಂಬ ಖಡಕ್​ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. HIT ಮತ್ತು HIT2 ಯಶಸ್ಸಿನ ಬೆನ್ನಲ್ಲೇ ಹಿಟ್​ 3 ಇದೀಗ ತೆರೆಗೆ ಬರಲು ಎದುರುನೋಡುತ್ತಿದೆ. ಇತ್ತೀಚೆಗಷ್ಟೇ ಚಿತ್ರ ತಯಾರಕರು ಟ್ರೇಲರ್ ರಿಲೀಸ್ ಮಾಡಿದರು. ಇದಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಲಭಿಸಿದ್ದೇ ಆದರೂ ಸಿನಿಮಾ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮೇ.5ರಿಂದ ಈ ಐಫೋನ್​ಗಳಲ್ಲಿ ವಾಟ್ಸ್​ಆ್ಯಪ್​ ಸೇವೆ ಸ್ಥಗಿತ! ಹೀಗಿದೆ ಕಾರಣ | WhatsApp

2. ರೆಟ್ರೋ (ತಮಿಳು)

ಕಲಾವಿದರು: ನಟ ಸೂರ್ಯ, ನಟಿ ಪೂಜಾ ಹೆಗ್ಡೆ, ಜೋಜು ಜಾರ್ಜ್
ನಿರ್ದೇಶಕ: ಕಾರ್ತಿಕ್ ಸುಬ್ಬರಾಜ್

ರೆಟ್ರೋ ಚಿತ್ರದಲ್ಲಿ ತನ್ನ ಕಳೆದುಹೋದ ಪ್ರೀತಿಯನ್ನು ಮತ್ತೆ ಸೇರುವ ಪರಿವೇಲ್ ಕಣ್ಣನ್ ಕುರಿತಾದ ಕಥೆ. ಇದೊಂದು ನವೀರಾದ ಪ್ರೇಮಕಥೆ. ಪ್ರೀತಿ-ಪ್ರೇಮದ ಜೊತೆಗೆ ಸಾಹಸ ದೃಶ್ಯಗಳು ಕೂಡ ಚಿತ್ರದಲ್ಲಿವೆ. ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ ಈ ಸಿನಿಮಾದಲ್ಲಿ ಜಯರಾಮ್, ಪ್ರಕಾಶ್ ರಾಜ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

3. ಟೂರಿಸ್ಟ್​ ಫ್ಯಾಮಿಲಿ (ತಮಿಳು)

ಕಲಾವಿದರು: ಸಿಮ್ರಾನ್, ಶಶಿಕುಮಾರ್, ಯೋಗಿ ಬಾಬು
ನಿರ್ದೇಶಕ: ಅಭಿಶಾನ್ ಜೀವಿಂತ್

ಶ್ರೀಲಂಕಾದಿಂದ ಬಂದ ಪ್ರವಾಸಿ ಕುಟುಂಬವೊಂದು ತಮಿಳುನಾಡಿನಲ್ಲಿ ಆಶ್ರಯ ಪಡೆಯಲು ಬಂದಾಗ ತಮಗೆ ಎದುರಾಗುವ ಸಮಸ್ಯೆಗಳು, ಮನಮುಟ್ಟುವ ಹೃದಯಸ್ಪರ್ಶಿ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿರುವ ರೆಟ್ರೋ ಮತ್ತು HIT 3 ನಂತಹ ಚಿತ್ರಗಳೊಂದಿಗೆ ಈ ಸಿನಿಮಾ ಕೂಡ ಸ್ಪರ್ಧಿಸಲಿದೆ. ಇದು ಚಿತ್ರತಂಡಕ್ಕೆ ಗೆಲುವು ತಂದುಕೊಡಲಿದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

ಇದನ್ನೂ ಓದಿ:  ನಮ್ಮ ರಾಷ್ಟ್ರಕ್ಕಾಗಿ ನಾವು ರಕ್ತ ಹರಿಸುವೆವು; ಬಿಲಾವಲ್ ಭುಟ್ಟೋಗೆ ಪವನ್​ ಕಲ್ಯಾಣ್​ ತಿರುಗೇಟು | Pawan Kalyan

4. ಪಪ್ಪಿ (ಕನ್ನಡ)

ಕಲಾವಿದರು: ನಟ ಆದಿತ್ಯ ಜಿ, ಜಗದೀಶ್ .ಕೆ, ದುರ್ಗಪ್ಪ ಕಾಂಬ್ಳಿ
ನಿರ್ದೇಶನ: ಆಯುಷ್ ಮಲ್ಲಿ

ಉಜ್ವಲ ಭವಿಷ್ಯದ ಕನಸು ಕಾಣುತ ಬೆಂಗಳೂರಿಗೆ ವಲಸೆ ಬರುವ ಉತ್ತರ ಕರ್ನಾಟಕದ ಬಡ ಕುಟುಂಬದ ಪ್ರಯಾಣವನ್ನು ಪರಿ ಪರಿಯಾಗಿ ಅರ್ಥೈಸುವ ಪ್ರಯತ್ನವನ್ನು ಈ ಕನ್ನಡ ಚಿತ್ರ ಮಾಡಿದೆ. ಹಾಸ್ಯ, ಸಂಬಂಧ, ಭಾವನೆಗಳ ಕಥಾಹಂದರ ಇದರಲ್ಲಿದೆ ಎಂಬುದು ಗಮನಾರ್ಹ. ಒಟ್ಟಿನಲ್ಲಿ ನಾಲ್ಕು ಸಿನಿಮಾಗಳು ಇದೇ ಮೇ.01ರಂದು ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರ ಗಮನ ಗೆದ್ದು, ಉತ್ತಮ ಆದಾಯ ಗಳಿಸಲಿ ಎಂದು ಆಶಿಸೋಣ.

ಬೌಲರ್​ಗಳನ್ನು ನೋಡಲ್ಲ, ನನಗೆ ಕಿಂಚಿತ್ತು ಭಯವಿಲ್ಲ! ಎದುರಾಳಿ ತಂಡಗಳಿಗೆ ಶತಕ ‘ವೈಭವ’ ಸಂದೇಶ | Vaibhav Suryavanshi

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank