Father Murder: ಮಾದಕ ವ್ಯಸನಿಯಾಗಿದ್ದಲ್ಲದೇ, ಪೋಕರ್, ಆನ್ಲೈನ್ ಜೂಜಾಟ ಮತ್ತು ಬೆಟ್ಟಿಂಗ್ನಲ್ಲಿ ಹಣವನ್ನು ಕಳೆಯುತ್ತಿದ್ದ ಪುತ್ರನಿಗೆ ತಂದೆ ಬುದ್ದಿ ಮಾತು ಹೇಳಿದ್ದೇ ಇಂದು ಅವರ ಸಾವಿಗೆ ಕಾರಣವಾದ ಘಟನೆ ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯಲ್ಲಿ ವರದಿಯಾಗಿದೆ.
ಮೃತ ಶ್ರೀನಿವಾಸ ರಾವ್ ಈ ಹಿಂದೆ ಪುತ್ರ ಪುಲ್ಲರಾವ್ ಮಾಡಿಕೊಂಡಿದ್ದ ನಾಲ್ಕು ಲಕ್ಷ ರೂ. ಸಾಲವನ್ನು ತೀರಿಸಿದ್ದರು. ಮಾದಕ ವ್ಯಸನಿ ಮತ್ತು ಸಾಲದ ಚಟ ಹೊಂದಿದ್ದ ಮಗನಿಗೆ ಎಷ್ಟೇ ಬುದ್ದಿ ಹೇಳಿದರೂ ಪ್ರಯೋಜನವಿಲ್ಲ ಎಂಬ ಬೇಸರದಲ್ಲಿದ್ದ ಶ್ರೀನಿವಾಸ ರಾವ್, ಇದೇ ವಿಷಯಕ್ಕೆ ಮಗನೊಂದಿಗೆ ಜಗಳವಾಡಿದ್ದಾರೆ. ತಂದೆಯ ಬುದ್ದಿ ಮಾತುಗಳಿಗೆ ಬೇಸತ್ತ ಪುಲ್ಲರಾವ್, ಹೇಗಾದರೂ ಮಾಡಿ ಒಂದೇ ಏಟಿಗೆ ತಂದೆಯನ್ನು ಮುಗಿಸಲು ಹಲವಾರು ದಾರಿಯನ್ನು ಹುಡುಕಿದ್ದಾನೆ.
ಇದಕ್ಕಾಗಿ ಯೂಟ್ಯೂಬ್ ಮೊರೆ ಹೋದ ಪಾಪಿ ಪುತ್ರ, ಸರಣಿ ಕೊಲೆಯ ವಿಡಿಯೋಗಳನ್ನು ವೀಕ್ಷಿಸಿ, ಅದರಿಂದ ಪ್ರೇರಣೆಗೊಂಡಿದ್ದ. ತಾನು ಹೂಡಿದ್ದ ಸಂಚಿನಂತೆ ಈ ತಿಂಗಳ 8ರಂದು ಹೊಲದಲ್ಲಿ ತನ್ನ ತಂದೆಯನ್ನು ಹತ್ಯೆಗೈದ ಪುಲ್ಲರಾವ್, ತಂದೆಯ ಸಾವಿನ ಬಗ್ಗೆ ಅನುಮಾನಗಳಿವೆ ಎಂದು ಹೇಳುವ ಮೂಲಕ ಊರಿನ ಜನರ ದಿಕ್ಕನೇ ಬದಲಿಸಿದ್ದ. ಇದರಲ್ಲಿ ತನ್ನ ಕೈವಾಡವಿದೆ ಎಂಬ ಶಂಕೆ ಪೊಲೀಸರಿಗೆ ಗೊತ್ತಾಗಬಾರದು ಎಂಬ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಆತ ಕಣ್ಣೀರಿಟ್ಟಿದ್ದನು. ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿದಾಗ ಕೊಲೆಗಾರನ ನೆರಳು ಪೊಲೀಸರಿಗೆ ಸಿಕ್ಕಿತು.
ಇದನ್ನೂ ಓದಿ: ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಿಲಯನ್ಸ್ ಫೌಂಡೇಶನ್ ಕ್ರೀಡಾಪಟುಗಳಿಂದ ಇತಿಹಾಸ ಸೃಷ್ಟಿ; 20 ಚಿನ್ನ ಸಹಿತ 43 ಪದಕ ಗೆಲುವಿನ ಸಾಧನೆ
ಈ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು, ಮೃತ ವ್ಯಕ್ತಿಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ, ಇದು ಸಹಜ ಸಾವಲ್ಲ, ಕೊಲೆ ಎಂಬುದನ್ನು ದೃಢಪಡಿಸಿಕೊಂಡಿದ್ದಾರೆ. ತಕ್ಷಣವೇ ಪುತ್ರ ಪುಲ್ಲಾರಾವ್ನನ್ನು ವಿಚಾರಣೆಗೆ ಒಳಪಡಿಸಿ, ತನಿಖೆ ನಡೆಸಿದ ಪೊಲೀಸರಿಗೆ ಈತನೇ ಕೊಲೆಗಾರ ಎಂಬುದು ಸಾಬೀತಾಗಿದೆ. ತಾನೇ ಕೊಲೆಗೈದಿದ್ದು ಎಂದು ಸತ್ಯ ಬಾಯ್ಬಿಟ್ಟ ಬೆನ್ನಲ್ಲೇ ಆರೋಪಿಯನ್ನು ಮೈಲವರಂ ಪೊಲೀಸರು ಬಂಧಿಸಿದ್ದಾರೆ,(ಏಜೆನ್ಸೀಸ್).